ಪುಣೆ: ಪುಣೆ ಮಹಾನಗರ ಪಾಲಿಕೆಯ (PMC)) ಸ್ವಚ್ಛತಾ ಕಾರ್ಮಿಕ ಮಹಾದೇವ್ ಜಾಧವ್ ಅವರು ಹಾಡುಗಳ ಮೂಲಕ ಜನರಿಗೆ ತ್ಯಾಜ್ಯ ನಿರ್ವಹಣೆಯ ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ಒಂದು ಹೊಸ ವಿಧಾನವನ್ನು ಕಂಡುಹಿಡಿದಿದ್ದಾರೆ. ಹಾಡು ಹಾಡುತ್ತಲೇ ಅವರು ತ್ಯಾಜ್ಯ ನಿರ್ವಹಣೆಯ ಬಗ್ಗೆ ಪರಿಣಾಮಕಾರಿ ಸಂದೇಶವನ್ನು ನೀಡುತ್ತಿದ್ದಾರೆ.
“ಯಾರೂ ನನ್ನನ್ನು ಹಾಡುವಂತೆ ಕೇಳಲಿಲ್ಲ, ನಾನೇ ಹೆಚ್ಚು ಜನರನ್ನು ತಲುಪುವ ಉದ್ದೇಶದಿಂದ ಹಾಡು ಹಾಡುತ್ತಿದ್ದೇನೆ. ಒಣ ಮತ್ತು ಹಸಿ ತ್ಯಾಜ್ಯವನ್ನು ಎಲ್ಲಿ ಹಾಕಬೇಕು ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು, ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸುವ ಬಗ್ಗೆ ಜನರಿಗೆ ಅರಿವು ಮೂಡಿಸಸಲು ನಾನು ಹಾಡುತ್ತೇನೆ. ಜನರು ಉತ್ತಮ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡಿದರೆ ಪಾಲಿಕೆಯ ಸ್ವಚ್ಛತಾ ಕಾರ್ಮಿಕರಿಗೆ ಸಾಕಷ್ಟು ಸಹಾಯಕವಾಗುತ್ತದೆ”ಎಂದು ಜಾಧವ್ ಹೇಳುತ್ತಾರೆ.
“ಇತ್ತೀಚೆಗೆ ನಾನು ಹಾಡುವ ವೀಡಿಯೊ ವೈರಲ್ ಆಗಿದೆ. ನಾನು ಒಂದು ಸೆಮಿನಾರ್ಗೆ ಹೋಗಿ ಹಾಡು ಹಾಡಿದ್ದೆ, ಅದು ವೈರಲ್ ಆಯಿತು. ನಾನು ಕಳೆದ 25 ವರ್ಷಗಳಿಂದ ಸ್ವಚ್ಛತಾ ಕೆಲಸ ಮಾಡುತ್ತಿದ್ದೇನೆ, ಆದರೆ ಈಗ ಬದಲಾವಣೆಗಳು ಖಂಡಿತವಾಗಿಯೂ ಬಂದಿವೆ, ಸುಮಾರು 60 ಪ್ರತಿಶತದಷ್ಟು ಜನರು ಈಗ ನಿಯಮಗಳನ್ನು ಅರ್ಥಮಾಡಿಕೊಳ್ಳಲು ಆರಂಭಿಸಿದ್ದಾರೆ ಮತ್ತು ಅವುಗಳನ್ನು ಅನುಸರಿಸುತ್ತಿದ್ದಾರೆ “ಎಂದು ಅವರು ಹೇಳಿದ್ದಾರೆ.
ಹಾಡುತ್ತಾ ಸ್ವಚ್ಛಗೊಳಿಸುವುದು ಮಾತ್ರವಲ್ಲದೇ ಜಾಧವ್ ಅವರು, ಸ್ವತಃ ಸ್ವಚ್ಛತೆಯ ಬಗ್ಗೆ ವಿಭಿನ್ನ ಹಾಡುಗಳನ್ನು ರಚಿಸಿದ್ದಾರೆ, ಹಸಿ ಮತ್ತು ಒಣಗಿದ ಕಸವನ್ನು ಬೇರ್ಪಡಿಸುವಾಗ ಪ್ರತಿದಿನ ಬೆಳಿಗ್ಗೆ ಜನರ ಮುಂದೆ ಹಾಡುತ್ತಾರೆ.
ಜನಪ್ರಿಯ ಬಾಲಿವುಡ್ ರಾಗಗಳ ರೀಮಿಕ್ಸ್ ಆಗಿರುವ ಅವರ ಹಾಡುಗಳು ಸ್ವಚ್ಛತೆಯ ಮಹತ್ವವನ್ನು ಜನರಿಗೆ ಅರ್ಥಮಾಡಿಕೊಡುವಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.