ನವದೆಹಲಿ: ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ಮತ್ತು ಭಾರತೀಯ ಸೈನಿಕ ಗೌರವಾರ್ಥ ನಾಲ್ಕು ಜನರ ತಂಡವು ದೆಹಲಿಯಿಂದ ಹೈದರಾಬಾದ್ವರೆಗೆ 12 ರಾಜ್ಯಗಳು ಮತ್ತು 599 ನಗರಗಳನ್ನು ಒಳಗೊಂಡ 6,000 ಕಿಲೋಮೀಟರ್ಗಳ ‘ಭಾರತ ಯಾತ್ರೆ’ಯನ್ನು ನಡೆಸಿದೆ.
ಈ ವರ್ಷದ ಫೆಬ್ರವರಿ 14 ರಂದು ನಡೆದ ಪುಲ್ವಾಮ ದಾಳಿಯಲ್ಲಿ ಹತ್ಯೆಗೀಡಾದ ಸೈನಿಕರಿಗೆ ಗೌರವಾರ್ಥ ಆರಂಭಿಸಲಾದ ‘ಐ ಸ್ಟ್ಯಾಂಡ್ ಫಾರ್ ದಿಸ್ ನೇಷನ್’ ಉಪಕ್ರಮದ ಭಾಗವಾಗಿ ‘ಭಾರತ ಯಾತ್ರೆ’ಯನ್ನು ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಸಿಆರ್ಪಿಎಫ್ ಯೋಧರು ಪ್ರಾಣ ಕಳೆದುಕೊಂಡಿದ್ದರು.
“ಪುಲ್ವಾಮಾ ದಾಳಿಯಲ್ಲಿ ನಾವು 40 ಸಿಆರ್ಪಿಎಫ್ ಯೋಧರನ್ನು ಕಳೆದುಕೊಂಡೆವು. ಘಟನೆಯ ಬಳಿಕ ನಾವು ‘ಐ ಸ್ಟ್ಯಾಂಡ್ ಫಾರ್ ದಿಸ್ ನೇಷನೆ’ ಉಪಕ್ರಮವನ್ನು ಪ್ರಾರಂಭಿಸಿದೆವು. ನಮ್ಮ ಮುಖ್ಯ ಧ್ಯೇಯವೆಂದರೆ ಪ್ರತಿಯೊಬ್ಬ ಭಾರತೀಯರು ವೀರ ಸೈನಿಕರಿಗೆ ನಮಸ್ಕರಿಸಬೇಕು ಮತ್ತು ಅವರೊಂದಿಗೆ ಸದಾ ನಿಲ್ಲಬೇಕು ಎಂಬುದು” ಎಂದು ‘ಐ ಸ್ಟ್ಯಾಂಡ್ ಫಾರ್ ದಿಸ್ ನೇಷನ್’ ತಂಡದ ಸದಸ್ಯ ರತನ್ ರಾಜು ಹೇಳುತ್ತಾರೆ.
“ಈ ಉಪಕ್ರಮದ ಒಂದು ಭಾಗವಾಗಿ, ನಾವು ದೆಹಲಿಯಿಂದ ಕನ್ಯಾಕುಮಾರಿಯವರೆಗೆ ‘ಭಾರತ ಯಾತ್ರೆ’ ಪ್ರಾರಂಭಿಸಿದ್ದೇವೆ. ನಾವು ದೇಶಾದ್ಯಂತ 12 ರಾಜ್ಯಗಳನ್ನು ಮತ್ತು 599 ನಗರಗಳನ್ನು ಸಂಚರಿಸಿದ್ದೆವೆ. ಒಟ್ಟಾರೆಯಾಗಿ ನಾವು ಹಗಲು ರಾತ್ರಿ 6,000 ಕಿ.ಮೀ ಪ್ರಯಾಣಿಸಿದ್ದೇವೆ. ಅಂತಿಮವಾಗಿ, ನಾವು ಹೈದರಾಬಾದ್ ಅನ್ನು ಯಶಸ್ವಿಯಾಗಿ ತಲುಪಿದ್ದೇವೆ” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.