ನವದೆಹಲಿ: ಗಂಗಾ ನದಿಯ ಶುದ್ಧೀಕರಣ ಮತ್ತು ನದಿ ನೀರನ್ನು ಸರಾಗವಾಗಿ ಹರಿಯುವಂತೆ ಮಾಡುವ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪ್ರಸ್ತುತ ನಡೆಯುತ್ತಿರುವ ಸಂತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಹತ್ವಾಕಾಂಕ್ಷೆಯ ರಾಷ್ಟ್ರ ಗಂಗಾ ನದಿ(ಪುನರುಜ್ಜೀವನ, ಸಂರಕ್ಷಣಾ ಮತ್ತು ನಿರ್ವಹಣಾ) ಮಸೂದೆಯನ್ನು ಅನುಮೋದಿಸಲು ನಿರ್ಧರಿಸಿದೆ.
ಈ ಮಸೂದೆಯು ಗಂಗಾ ನದಿಯನ್ನು ಮಾಲಿನ್ಯ ಮಾಡುವವರ ಮೇಲೆ ರೂ.50 ಕೋಟಿಗಳವರೆಗೆ ದಂಡವನ್ನು ವಿಧಿಸಲು ಮತ್ತು ಸೆರೆವಾಸವನ್ನು ನೀಡಲು ಅವಕಾಶ ಮಾಡಿಕೊಡಲಿದೆ. ಈ ಪ್ರಾಸ್ತಾಪಿತ ಮಸೂದೆಯಡಿಯಲ್ಲಿ ಗಂಗೆಯನ್ನು ಮಲಿನ ಮಾಡುವುದು ಜಾಮೀನು ರಹಿತ ಅಪರಾಧವಾಗಿದೆ.
ಗಂಗಾ ತೀರದಲ್ಲಿ ನಿರ್ಮಿಸಲಾದ ಅಕ್ರಮ ಜೆಟ್ಟಿಗಳು ಮತ್ತು ಬಂದರುಗಳು, ನದಿಯ ನೀರನ್ನು ತಿರುಗಿಸುವಿಕೆ, ಅಕ್ರಮ ಗಣಿಗಾರಿಕೆ, ಕಲ್ಲುಗಣಿಗಾರಿಕೆ ಮತ್ತು ನದಿಪಾತ್ರದಿಂದ ಅಂತರ್ಜಲವನ್ನು ಅಕ್ರಮವಾಗಿ ಹೊರತೆಗೆಯುವುದು ಈ ಮಸೂದೆಯಡಿ ಶಿಕ್ಷಾರ್ಹ ಅಪರಾಧವಾಗಿದೆ.
ಗಂಗಾ ಮತ್ತು ಅದರ ಉಪನದಿಗಳ ಉದ್ದಕ್ಕೂ ಘಟ್ಟಗಳನ್ನು ಹಾಳುಮಾಡಿದರೆ ಅಥವಾ ದೋಷಪೂರಿತಗೊಳಿಸದರೆ ಭಾರಿ ದಂಡವನ್ನು ವಿಧಿಸಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಅಲ್ಲದೇ, ನದಿಯ ಸರಾಗ ಹರಿವಿಗೆ ಅಡಚಣೆ ಉಂಟುಮಾಡುವುದರ ವಿರುದ್ಧವೂ ಗರಿಷ್ಠ 50 ಕೋಟಿ ರೂ.ಗಳ ದಂಡವನ್ನು ಪ್ರಸ್ತಾಪಿಸಲಾಗಿದೆ ಎಂದು ಗಮನಾರ್ಹವಾಗಿದೆ.
ವರದಿಯ ಪ್ರಕಾರ, ಪ್ರಸ್ತಾವಿತ ಕಾಯ್ದೆಯಡಿ ಗಂಗಾ ಪ್ರೊಟೆಕ್ಷನ್ ಕಾರ್ಪ್ಸ್ ಅನ್ನು ಸ್ಥಾಪಿಸುವ ಅವಕಾಶವಿದೆ, ಇದನ್ನು ಗೃಹ ವ್ಯವಹಾರ ಸಚಿವಾಲಯ ನಿರ್ವಹಿಸಲಿದೆ ಮತ್ತು ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘಿಸಿದ ಯಾವುದೇ ವ್ಯಕ್ತಿಯನ್ನು ಬಂಧಿಸಲು ಮತ್ತು ವ್ಯಕ್ತಿಯನ್ನು ಸ್ಥಳೀಯ ಪೊಲೀಸ್ ಠಾಣೆಯ ಮುಂದೆ ಹಾಜರುಪಡಿಸುವ ಅಧಿಕಾರವನ್ನು ಹೊಂದಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.