ಕಠ್ಮಂಡು: ಭಗವಾನ್ ಬುದ್ಧನ ಜನ್ಮಸ್ಥಳವಾದ ನೇಪಾಳದ ಲುಂಬಿನಿಯಲ್ಲಿ ತ್ರಿಪಿಟಕ ಪಠಿಸುವ ಬೃಹತ್ ಕಾರ್ಯಕ್ರಮವನ್ನು ಆಯೋಜನೆಗೊಳಿಸಲಾಗಿದೆ. ಇದರಲ್ಲಿ 25 ದೇಶಗಳ ಬೌದ್ಧ ಭಿಕ್ಷುಗಳು ಪಾಲ್ಗೊಂಡಿದ್ದರು.
ಭಾರತ, ಥಾಯ್ಲೆಂಡ್, ಮಯನ್ಮಾರ್ ಮತ್ತು ನೇಪಾಳ ಸೇರಿದಂತೆ 25 ದೇಶಗಳ ಸುಮಾರು ಒಂದು ಸಾವಿರ ಬೌದ್ಧ ಅನುಯಾಯಿಗಳು ತ್ರಿಪಿಟಕವನ್ನು ಮೂರು ದಿನಗಳ ಕಾಲ ಪಠಣ ಮಾಡುತ್ತಿದ್ದಾರೆ.
ತ್ರಿಪಿಟಕ ಪಠಿಸುವ ಮೊದಲ ಸಂಚಿಕೆಯ ಸಮಾರಂಭವು 2008ರಲ್ಲಿ ನಡೆದಿತ್ತು, ಇದರಲ್ಲಿ 18 ದೇಶಗಳ 700 ಭಿಕ್ಷುಗಳು ಭಾಗಿಯಾಗಿದ್ದರು. ಈ ಬಾರಿ ಎರಡನೇ ಸಂಚಿಕೆ ಜರುಗಿದ್ದು, 25 ದೇಶಗಳ ಸಾವಿರಕ್ಕೂ ಅಧಿಕ ಭಿಕ್ಷುಗಳು ಭಾಗಿಯಾಗಿ ತ್ರಿಪಿಟಕವನ್ನು ಪಠಿಸಿದ್ದಾರೆ.
ಬೌದ್ಧಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುವ ತ್ರಿಪಿಟಕದ ಬಗ್ಗೆ ಸಾಮಾನ್ಯ ಜನರಿಗೆ ಹೆಚ್ಚು ತಿಳಿದಿಲ್ಲ, ಹೀಗಾಗಿ ಇಂತಹ ಸಮಾರಂಭಗಳನ್ನು ಏರ್ಪಡಿಸುವುದರಿಂದ ಜನರಿಗೆ ಧರ್ಮಗ್ರಂಥಗಳ ಬಗ್ಗೆ ಅರಿವು ಮೂಡಿಸಲು ಸಹಾಯ ಆಗುತ್ತದೆ ಎಂಬುದಾಗಿ ಲುಂಬಿನಿ ಡೆವಲಪ್ಮೆಂಟ್ ಟ್ರಸ್ಟ್ ಅಧಿಕಾರಿ ಗ್ಯಾನಿನ್ ರಾಯ್ ಹೇಳುತ್ತಾರೆ.
ಮೂರು ದಿನಗಳ ಕಾರ್ಯಕ್ರಮವನ್ನು ಸೂತ್ರಿಪಿಟಕ ಪಠಣದೊಂದಿಗೆ ಪ್ರಾರಂಭಿಸಲಾಯಿತು, ನಂತರ ತ್ರಿಪಿಟಕ ಪಠಿಸಲಾಯಿತು. ತಮ್ಮದೇ ಭಾಷೆಗಳು ಮತ್ತು ಶೈಲಿಗಳಲ್ಲಿ ಭಾಗವಹಿಸಿದವರು ತ್ರಿಪಿಟಕವನ್ನು ಪಠಿಸಿದರು.
ಸಮಾರಂಭದ ಎರಡನೇ ದಿನ ಬರ್ಮಾದ (ಮಯನ್ಮಾರ್) ಸನ್ಯಾಸಿಗಳ ನೇತೃತ್ವದಲ್ಲಿ ಅಬಿಧಮಾಪಿಟಕ ಪಠಣ ನಡೆಯಿತು. ನಂತರ ನೇಪಾಳ, ಜಪಾನ್, ವಿಯೆಟ್ನಾಂ, ಚೀನಾ ಮತ್ತು ಇತರ ಸನ್ಯಾಸಿಗಳು ಪಠಣ ನೆರವೇರಿಸಿಕೊಟ್ಟರು.
ಮೂರನೇ ದಿನ ಥಾಯ್ಲೆಂಡ್ ಮತ್ತು ಕಾಂಬೋಡಿಯಾದ ಸನ್ಯಾಸಿಗಳ ನೇತೃತ್ವದಲ್ಲಿ ಬಿನಾಯ್ಪಿಟಕ ಪಠಣ ನಡೆಯಿತು. ಇದು ಮಾಯಾ ದೇವಿ ದೇವಾಲಯದ ಪವಿತ್ರ ಉದ್ಯಾನದಲ್ಲಿ ಮೇಣದ ಬತ್ತಿಗಳನ್ನು ಬೆಳಗಿಸುವುದರೊಂದಿಗೆ ಮುಕ್ತಾಯವಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.