ನವದೆಹಲಿ: ಟಿವಿ ಮಾಧ್ಯಮಗಳನ್ನು, ಪತ್ರಿಕೆಗಳನ್ನು ಉದ್ಯಮ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳು ಮುನ್ನಡೆಸುತ್ತಿರುವುದರಿಂದ ಇಂದು ಪತ್ರಿಕೋದ್ಯಮದ ಮೂಲ ಆಶಯಗಳು ನಾಶವಾಗುತ್ತಿವೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ನಾಯ್ಡು, “ಸೆನ್ಸೇಷನಲ್ಗೊಳಿಸುವುದು ಇಂದಿನ ದಿನದ ಪ್ರವೃತ್ತಿಯಾಗಿದೆ, ಸುದ್ದಿ ಮತ್ತು ಅಭಿಪ್ರಾಯಗಳನ್ನು ಒಟ್ಟಿಗೆ ಸೇರಿಸಲಾಗುತ್ತಿದೆ” ಎಂದರು.
“ಹಿಂದೆ, ಸುದ್ದಿಗಳು ಸುದ್ದಿಗಳೇ ಆಗಿರುತ್ತಿದ್ದೆವು, ಅದನ್ನು ಎಂದಿಗೂ ವ್ಯಾಖ್ಯಾನಿಸಲಾಗುತ್ತಿರಲಿಲ್ಲ ಅಥವಾ ತಪ್ಪಾಗಿ ಅರ್ಥೈಸಲಾಗುತ್ತಿರಲಿಲ್ಲ, ಈಗ ಸುದ್ದಿ ಮತ್ತು ಅಭಿಪ್ರಾಯಗಳನ್ನು ಒಟ್ಟಿಗೆ ಸೇರಿಸಲಾಗುತ್ತಿದೆ, ಇದು ದೊಡ್ಡ ಸಮಸ್ಯೆಯಾಗಿದೆ” ಎಂದು ಹೇಳಿದರು.
“ಸೆನ್ಸೇಷನಲಿಸಂ ಇಂದಿನ ಪ್ರವೃತ್ತಿಯಾಗಿದೆ, ಸೆನ್ಸೇಷನಲ್ ಸುದ್ದಿಗಳು ಸೆನ್ಸ್ ಲೆಸ್ ಸುದ್ದಿಗಳಾಗುತ್ತಿವೆ. ಉದ್ಯಮ ಸಂಸ್ಥೆಗಳು, ರಾಜಕೀಯ ಪಕ್ಷಗಳು ಮಾಧ್ಯಮಗಳನ್ನು ಹುಟ್ಟು ಹಾಕುತ್ತಿವೆ, ಇದರ ಮೂಲಕ ತಮ್ಮ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುತ್ತಿವೆ. ಇದರಿಂದ ಪತ್ರಿಕೋದ್ಯಮದ ಮೂಲ ಆಶಯಕ್ಕೆ ಧಕ್ಕೆಯಾಗುತ್ತಿದೆ” ಎಂದಿದ್ದಾರೆ.
“ರಾಜಕಾರಣಿಗಳಿಗೆ ಮಾಧ್ಯಮಗಳನ್ನ ಸ್ಥಾಪಿಸುವ ಹಕ್ಕಿದೆ. ಆದರೆ ಇಂತಹ ಮಾಧ್ಯಮಗಳು ಇಂತಹ ರಾಜಕಾರಣಿಯಿಂದ ನಡೆಸಲ್ಪಡುತ್ತಿದೆ ಎಂಬುದನ್ನು ದೊಡ್ಡದಾಘಿ ಬಿಂಬಿಸಬೇಕಾದುದು ಅಗತ್ಯ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.