ನವದೆಹಲಿ: ನಮ್ಮ ಕಡಲತೀರಗಳನ್ನು ಸ್ವಚ್ಛಗೊಳಿಸಲು ಮತ್ತು ಕರಾವಳಿ ಪರಿಸರ ವ್ಯವಸ್ಥೆಗಳ ಮಹತ್ವದ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯವು ನದಿ ತೀರಗಳ ಸಾಮೂಹಿಕ ಸ್ವಚ್ಛತಾ ಮತ್ತು ಜಾಗೃತಿ ಅಭಿಯಾನವನ್ನು ಆರಂಭಿಸಿದೆ. ಇದಕ್ಕಾಗಿ 50 ಕಡಲತೀರಗಳನ್ನು ಗುರುತಿಸಲಾಗಿದೆ.
ನವೆಂಬರ್ 11 ರಿಂದ 19 ರವರೆಗೆ ‘ಸ್ವಚ್ಛ ನಿರ್ಮಲ್ ತಟ್ ಅಭಿಯಾನ್’ ಅಭಿಯಾನ ಜರುಗಲಿದೆ. ಈ ಅಭಿಯಾನವು 10 ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಗುಜರಾತ್, ದಮನ್ ಮತ್ತು ಡಿಯು, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ನಡೆಯಲಿದೆ.
ಎಕೋ-ಕ್ಲಬ್ಗಳು, ಜಿಲ್ಲಾಡಳಿತ, ಸಂಘ ಸಂಸ್ಥೆಗಳು, ಸ್ವಯಂಸೇವಕರು, ಸ್ಥಳೀಯ ಸಮುದಾಯಗಳು ಮತ್ತು ಇತರರು ಸೇರಿ ಎಲ್ಲಾ ಕಡಲತೀರಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಿದ್ದಾರೆ. 10 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಕೋ-ಕ್ಲಬ್ಗಳಿಗಾಗಿನ ರಾಜ್ಯ ನೋಡೆಲ್ ಏಜೆನ್ಸಿಗಳು ವಾರಗಳ ಸ್ವಚ್ಛತಾ ಅಭಿಯಾನವನ್ನು ಮೇಲ್ವಿಚಾರಣೆ ಮಾಡಲಿದೆ. ಎಕೋ ಕ್ಲಬ್ಬಿನ ನೋಡೆಲ್ ಶಿಕ್ಷಕರು ಸಂಪೂರ್ಣ ಅಭಿಯಾನದವರೆಗೆ ಜೊತೆಗೆಯೇ ಇರಲಿದ್ದಾರೆ.
ಪ್ರತಿ ನಿತ್ಯ ಒಂದು ತಟದಲ್ಲಿ ಎರಡು ಗಂಟೆಗಳ ಕಾಲ ಸ್ವಚ್ಛತಾ ಕಾರ್ಯ ನಡೆಲಿದೆ. ಒಂದು ಕಿಲೋಮೀಟರ್ ವ್ಯಾಪ್ತಿ ಸ್ವಚ್ಛಗೊಳ್ಳಲಿದೆ. ಸ್ವಚ್ಛತೆಗಾಗಿ ಬೀಚ್ ಕ್ಲೀನಿಂಗ್ ಮೆಶಿನ್ ಅನ್ನು ನಿಯೋಜನೆಗೊಳಿಸಲಾಗುತ್ತದೆ. ಸಂಗ್ರಹಿಸಿದ ಕಸವನ್ನು ತ್ಯಾಜ್ಯ ನಿರ್ವಹಣಾ ಕಾಯ್ದೆ 2016ರ ಅನ್ವಯ ನಿರ್ವಹಣೆ ಮಾಡಲಾಗುತ್ತದೆ.
ಅಭಿಯಾನವು ಪೂರ್ಣಗೊಂಡ ಬಳಿಕ ಅತ್ಯುತ್ತಮ ಪ್ರದರ್ಶನವನ್ನು ಕಂಡ 3 ಬೀಚ್ಗಳಿಗೆ ಪ್ರಶಸ್ತಿ ಮತ್ತು ಸರ್ಟಿಫಿಕೇಟ್ ಅನ್ನು ನೀಡಲು ನಿರ್ಧರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.