ನವದೆಹಲಿ: ನಿರ್ಮಾಣ ಯೋಜನೆಗಳು ಸ್ಥಗಿತಗೊಂಡ ಹಿನ್ನಲೆಯಲ್ಲಿ ಸಂಕಷ್ಟಕ್ಕೀಡಾಗಿರುವ ಗೃಹ ಖರೀದಿದಾರರ ಬೆಂಬಲಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಗಮಿಸಿದ್ದಾರೆ. ಸ್ಥಗಿತಗೊಂಡ ವಸತಿ ಯೋಜನೆಗಳಿಗೆ ಹಣ ಒದಗಿಸಲು ರೂ.25,000 ಕೋಟಿಯ ನಿಧಿ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಅಗ್ಗದ ಮತ್ತು ಮಧ್ಯಮ ಆದಾಯ ವಸತಿ ವಲಯದಲ್ಲಿ ಸ್ಥಗಿತಗೊಂಡಿರುವ ವಸತಿ ಯೋಜನೆಗಳಿಗೆ ‘ಸ್ಪೆಷಲ್ ವಿಂಡೋ’ ಅನ್ನು ಸ್ಥಾಪಿಸಿ ಆದ್ಯತಾ ಸಾಲ ಹಣಕಾಸು ನೀಡಲು ನಿರ್ಧರಿಸಲಾಗಿದೆ.
ಸುಮಾರು 4.58 ಲಕ್ಷ ವಸತಿ ಘಟಕಗಳನ್ನು ಒಳಗೊಂಡಿರುವ 1600 ಯೋಜನೆಗಳು ಪ್ರಸ್ತುತ ದೇಶದಲ್ಲಿ ಸ್ಥಗಿತಗೊಂಡಿವೆ. ಲಕ್ಷಾಂತರ ಕುಟುಂಬಗಳು ತಮ್ಮ ಅಮೂಲ್ಯವಾದ ಜೀವಮಾನದ ಉಳಿತಾಯವನ್ನು ಈ ವಸತಿ ಘಟಕಗಳ ಮೇಲೆ ಮುಂಗಡವಾಗಿ ಹೂಡಿಕೆ ಮಾಡಿವೆ. ಇವುಗಳು ಸ್ಥಗಿತಗೊಂಡ ಹಿನ್ನಲೆಯಲ್ಲಿ ಅವರ ಬದುಕು ಸಂಕಷ್ಟಕ್ಕೆ ಈಡಾಗಿದೆ.
ಸರ್ಕಾರವು ನಿಧಿಗೆ 10,000 ಕೋಟಿ ರೂ. ನೀಡಿದರೆ, ಎಸ್ಬಿಐ ಮತ್ತು ಎಲ್ಐಸಿಯಂತಹ ಇತರ ಸಂಸ್ಥೆಗಳು ಸಾರ್ವಭೌಮ ಸಂಪತ್ತು ನಿಧಿಗಳು ಮತ್ತು ಪಿಂಚಣಿ ನಿಧಿಗಳು ಉಳಿದ 15,000 ಕೋಟಿ ರೂ. ಹಣವನ್ನು ಒದಗಿಸಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.