ನವದೆಹಲಿ: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಇಂದು ನವದೆಹಲಿಯಲ್ಲಿ ವೇಸ್ಟ್ ಲ್ಯಾಂಡ್ ಅಟ್ಲಾಸ್ 2019 ಅನ್ನು ಬಿಡುಗಡೆ ಮಾಡಿದರು. ಇಂಡಿಯನ್ ರಿಮೋಟ್ ಸೆನ್ಸಿಂಗ್ ಸ್ಯಾಟಲೈಟ್ ಡೇಟಾವನ್ನು ಬಳಸಿಕೊಂಡು ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (NRSC) ನಡೆಸಿದ ಪಾಳು ಭೂಮಿಗಳ ಹೊಸ ಮ್ಯಾಪಿಂಗ್ ಕಾರ್ಯ ಇದಾಗಿದೆ. ವೇಸ್ಟ್ ಲ್ಯಾಂಡ್ ಅಟ್ಲಾಸ್ 2019 ರ ಐದನೇ ಆವೃತ್ತಿಯನ್ನು ಇಂದು ಬಿಡುಗಡೆ ಮಾಡಲಾಗಿದೆ.
ಭೂಮಿಯ ಸಾಮರ್ಥ್ಯಕ್ಕೂ ಮೀರಿದ ಒತ್ತಡವನ್ನು ಅದರ ಮೇಲೆ ಹಾಕುವುದರಿಂದ ಅದರ ಫಲವತ್ತತೆ ಕ್ಷೀಣಿಸುತ್ತದೆ. ವಿಶ್ವದ ಒಟ್ಟು ಭೂಪ್ರದೇಶದ 2.4% ಹೊಂದಿರುವ ಭಾರತವು ವಿಶ್ವದ ಜನಸಂಖ್ಯೆಯ 18% ಅನ್ನು ಸಹಿಸಿಕೊಳ್ಳುತ್ತಿದೆ. ಭಾರತದಲ್ಲಿ ಕೃಷಿ ಭೂಮಿಯ ತಲಾ ಲಭ್ಯತೆಯು 0.12 ಹೆಕ್ಟರ್, ಆದರೆ ವಿಶ್ವದ ತಲಾ ಕೃಷಿ ಭೂಮಿ ಲಭ್ಯತೆ 0.29 ಹೆಕ್ಟೆರ್ ಆಗಿದೆ. ಹೀಗಾಗಿ, ಬಂಜರು ಭೂಮಿಯ ದೃಢವಾದ ಮಾಹಿತಿಯು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ ಮತ್ತು ವಿವಿಧ ಭೂ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಉತ್ಪಾದನಾ ಬಳಕೆಗಾಗಿ ಬಂಜರು ಭೂಮಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಹಾಯ ಮಾಡುತ್ತದೆ.
ವೇಸ್ಟ್ ಲ್ಯಾಂಡ್ ಅಟ್ಲಾಸ್ ಜಮ್ಮು ಮತ್ತು ಕಾಶ್ಮೀರದ ಸುಮಾರು 12.08 Mha ಪ್ರದೇಶದ ಮ್ಯಾಪಿಂಗ್ ಸೇರಿದಂತೆ ವಿವಿಧ ವರ್ಗದ ಬಂಜರು ಪ್ರದೇಶಗಳ ಜಿಲ್ಲಾ ಮತ್ತು ರಾಜ್ಯವಾರು ವಿತರಣೆಯ ಮಾಹಿತಿಯನ್ನು ಒದಗಿಸುತ್ತದೆ.
2008-09 ಮತ್ತು 2015-16ರ ನಡುವೆ ಬಂಜರು ಭೂಮಿಯಲ್ಲಿನ ಬದಲಾವಣೆಗಳನ್ನು ಅಟ್ಲಾಸ್ನಲ್ಲಿ ಪ್ರಸ್ತುತಪಡಿಸಲಾಗಿದೆ. 2008-09ರಲ್ಲಿನ 56.60 ಮೆಗಾಹರ್ (17.21%) ಕ್ಕೆ ಹೋಲಿಸಿದರೆ 2015-16ನೇ ಸಾಲಿನಲ್ಲಿ ಇಡೀ ದೇಶಕ್ಕೆ 55.76 Mha (16.96%) ರಷ್ಟಿರುವ ಪಾಳು ಭೂಮಿಗಳ ವಿಸ್ತಾರವನ್ನು ಅಂದಾಜು ಮಾಡಲು ಈ ಪ್ರಯತ್ನದಿಂದ ಸಾಧ್ಯವಾಗಿದೆ. ಈ ಅವಧಿಯಲ್ಲಿ 1.45 Mha ಪಾಳುಭೂಮಿಗಳನ್ನು ಪಾಳುಭೂಮಿ ಅಲ್ಲದ ವರ್ಗಗಳಾಗಿ ಪರಿವರ್ತಿಸಲಾಗಿದೆ.
आज राष्ट्रीय सुदूर संवेदन केंद्र (एनआरएससी) के सहयोग से भूमि संसाधन विभाग द्वारा प्रस्तुत “वेस्टलैंड्स एटलस 2019” का विमोचन किया…#WastelandsAtlas2019 pic.twitter.com/oG85tjUIjP
— Narendra Singh Tomar (@nstomar) November 4, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.