ನವದೆಹಲಿ: ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕತೆ ಒಪ್ಪಂದಕ್ಕೆ ಸಹಿ ಹಾಕದಿರುವ ಮೂಲಕ ಭಾರತದ 10 ಕೋಟಿ ಹಾಲು ಉತ್ಪಾದಕ ಕುಟುಂಬಗಳ ಹಿತಾಸಕ್ತಿಯನ್ನು ರಕ್ಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಡೈರಿ ದಿಗ್ಗಜ ಅಮೂಲ್ ಧನ್ಯವಾದಗಳನ್ನು ಅರ್ಪಣೆ ಮಾಡಿದೆ.
“ಗುಜರಾತ್ನ 36 ಲಕ್ಷ ಹಾಲು ಉತ್ಪಾದಕರ ಪರವಾಗಿ, ಅಮೂಲ್ ಇಂಡಿಯಾವು ದೇಶದ 10 ಕೋಟಿ ಹಾಲು ಉತ್ಪಾದಕ ಕುಟುಂಬಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಆದರ್ಶಪ್ರಾಯ ನಾಯಕತ್ವ ವಹಿಸಿದ್ದಕ್ಕಾಗಿ ಪ್ರಧಾನ ಮಂತ್ರಿಗೆ ಧನ್ಯವಾದ ಅರ್ಪಿಸುತ್ತದೆ. ದೇಶೀಯ ಹಾಲು ಉತ್ಪಾದಕರ ಪರವಾದ ಪ್ರಧಾನ ಮಂತ್ರಿಗಳ ದೃಷ್ಟಿ ಮತ್ತು ಸಂಕಲ್ಪವನ್ನು ಇದು ಪುನರುಚ್ಛರಿಸುತ್ತದೆ. ಒಂದು ವೇಳೆ ಒಪ್ಪಂದಕ್ಕೆ ಸಹಿ ಹಾಕಿದ್ದರೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ಡೈರಿ ಉತ್ಪನ್ನಗಳ ಆಮದಿನ ಪ್ರವಾಹವನ್ನು ಭಾರತ ಎದುರಿಸಬೇಕಾಗುತ್ತಿತ್ತು”ಎಂದು ಅಮೂಲ್ ಹೇಳಿಕೆಯಲ್ಲಿ ತಿಳಿಸಿದೆ.
ಗುಜರಾತ್ ಹಾಲು ಮಾರುಕಟ್ಟೆಯಲ್ಲಿ 17 ಡೈರಿಗಳನ್ನು ಮತ್ತು ಇತರ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಅತೀದೊಡ್ಡ ಬ್ರ್ಯಾಂಡ್ ಅಮೂಲ್ ಆಗಿದೆ. RCEP ಒಪ್ಪಂದದ ಪ್ರತಿಕೂಲ ಪರಿಣಾಮಗಳ ಬಗ್ಗೆ ಅಮೂಲ್ ಹಿಂದಿನಿಂದಲೂ ಕಾಳಜಿ ವಹಿಸಿತ್ತು. ಆಸ್ಟ್ರೇಲಿಯಾದಿಂದ. ನ್ಯೂಜಿಲ್ಯಾಂಡಿನಿಂದ ಅಗ್ಗದ ಡೈರಿ ಸರಕುಗಳ ಶೂನ್ಯ ಸುಂಕದ ಮೂಲಕ ಭಾರತಕ್ಕೆ ಆಮದಾಗುವ ಪರಿಣಾಮದ ಬಗ್ಗೆ ಸರ್ಕಾರವನ್ನು ಅದು ಎಚ್ಚರಿಸಿತ್ತು. ಈ ಬಗ್ಗೆ ವಾಣಿಜ್ಯ ಸಚಿವಾಲಯದ ಅಧಿಕಾರಿಗಳೊಂದಿಗೆ ಹಲವಾರು ಸಭೆಗಳನ್ನು ಅದು ನಡೆಸಿತ್ತು.
ಪ್ರಧಾನಿಯವರ ದೃಢನಿಶ್ಚಯ ಮತ್ತು ದೂರದೃಷ್ಟಿಯ ಫಲವಾಗಿ RCEP ಒಪ್ಪಂದಕ್ಕೆ ಒಳಪಡದಿರುವ ಮಹತ್ವದ ನಿರ್ಧಾರವನ್ನು ಭಾರತ ತೆಗೆದುಕೊಂಡಿದೆ ಎಂದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.