ಅಗರ್ತಾಲ: ತ್ರಿಪುರ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ಅವರು ತನ್ನ ರಾಜ್ಯದ ಸಾಮಾನ್ಯ ಕುಟುಂಬದ ಮನೆಗಳಿಗೆ ಅಚ್ಚರಿಯ ಭೇಟಿ ನೀಡುವ ಪರಿಪಾಠವನ್ನು ಆರಂಭಿಸಿದ್ದಾರೆ. ಅಭ್ಯಾಸವನ್ನು ಪ್ರಾರಂಭಿಸಿದ್ದಾರೆ. ಜನಸಾಮಾನ್ಯರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಅವರು ಮನೆ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
“ಪ್ರತಿ ಭಾನುವಾರ, ನಾನು ತ್ರಿಪುರದ ಸಾಮಾನ್ಯ ಜನರ ಮನೆಗೆ ಅಚ್ಚರಿಯ ಭೇಟಿ ನೀಡುತ್ತೇನೆ. ನಮ್ಮ ರಾಜ್ಯದ ಪ್ರೀತಿಯ ಜನರಲ್ಲಿ ಒಬ್ಬನಾಗಿರುವುದು ಬಹಳ ಸಂತೋಷವಾಗಿದೆ” ಎಂದು ಮುಖ್ಯಮಂತ್ರಿ ಸೋಮವಾರ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಅಲ್ಲದೇ, ತಮ್ಮ ಸರ್ಕಾರದ ಇತರ ನಾಯಕರುಗಳಿಗೂ, ಬಿಜೆಪಿ ಮುಖಂಡರುಗಳಿಗೂ ಅವರು ಮನೆ ಭೇಟಿ ನಡೆಸುವಂತೆ ಸಲಹೆಯನ್ನು ನೀಡಿದ್ದಾರೆ.
ನಿನ್ನೆ ಭಾನುವಾರ ಅವರು ಧಲೇಶ್ವರದ ಅಪರ್ಣಾ ಚೌಧುರಿ ಎಂಬ ಹಿರಿಯ ನಾಗರಿಕರ ಮನೆಗೆ ಅವರು ಭೇಟಿ ನೀಡಿದ್ದಾರೆ. ಅಲ್ಲಿ ಅವರು ಊಟವನ್ನೂ ಮಾಡಿದ್ದಾರೆ.
“ಚೌಧುರಿ ಮನೆಯವರ ಪ್ರೀತಿ ಮತ್ತು ಆತಿಥ್ಯಕ್ಕೆ ನಾನು ಅಭಾರಿಯಾಗಿದ್ದೇನೆ. ಅವರ ಮನೆಯಲ್ಲಿನ ಗೋಮಾತೆಗೂ ನಾನು ಆಹಾರ ನೀಡಿದೆ. ಈ ದಿನಗಳಲ್ಲಿ ನಗರಗಳಲ್ಲಿ ಗೋಶಾಲೆಗಳನ್ನು ನೋಡುವುದೇ ಅಪರೂಪ” ಎಂದಿದ್ದಾರೆ.
48 ವರ್ಷದ ದೇವ್ ಅವರು ಕಳೆದ ವರ್ಷ ಮಾರ್ಚ್ 4 ರಂದು ತ್ರಿಪುರಾದ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದರು. ಈ ಮೂಲಕ ಅಲ್ಲಿ 25 ವರ್ಷಗಳ ಎಡ ಆಡಳಿತವನ್ನು ಅಂತ್ಯಗೊಳಿಸಿದರು. ತ್ರಿಪುರಾದ ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.