ಗುರುಗ್ರಾಮ್: ಆಘಾತಕಾರಿ ಘಟನೆಯೊಂದರಲ್ಲಿ, ಹರಿಯಾಣದ ಗುರುಗ್ರಾಮದಲ್ಲಿ ಗೋ ಕಳ್ಳ ಸಾಗಾಣೆದಾರರು ಫೈರಿಂಗ್ ಮಾಡಿ ಬಜರಂಗದಳದ ಕಾರ್ಯಕರ್ತನೊಬ್ಬನನ್ನು ತೀವ್ರವಾಗಿ ಘಾಸಿಗೊಳಿಸಿದ್ದಾರೆ. ಗುರುಗ್ರಾಮದ ಸೆಕ್ಟರ್ 10ರಲ್ಲಿ ಈ ಘಟನೆ ನಡೆದಿದೆ.
ವರದಿಗಳ ಪ್ರಕಾರ, ಗಾಯಗೊಂಡ ಬಜರಂಗ ದಳದ ಕಾರ್ಯಕರ್ತ ಹರಿಯಾಣ ಸರ್ಕಾರದ ಗೋ ಕಳ್ಳ ಸಾಗಾಣೆ ವಿರೋಧಿ ಟಾಸ್ಕ್ ಫೋರ್ಸಿನ ಸದಸ್ಯನಾಗಿದ್ದ. ಈ ಪಡೆಯಲ್ಲಿ ಸ್ಥಳಿಯ ಸದಸ್ಯರು ಮತ್ತು ಸ್ವಯಂಸೇವಕರು ಮತ್ತು ಪೊಲೀಸರು ಇದ್ದಾರೆ.
ವಾಹನದಲ್ಲಿ ಆರು ದನಗಳನ್ನು ಗೋಕಳ್ಳರು ಸಾಗಾಣೆ ಮಾಡುತ್ತಿದ್ದರು. ಗೋರಕ್ಷಕರು ಈ ವಾಹನವನ್ನು ನೋಡುತ್ತಿದ್ದಂತೆ ಅದನ್ನು ಚೇಸ್ ಮಾಡಲು ಆರಂಭಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಈ ವೇಳೆ ಪೊಲೀಸರೂ ತಮ್ಮ ವಾಹನದಲ್ಲಿ ಕಳ್ಳರನ್ನು ಚೇಸ್ ಮಾಡಿದ್ದಾರೆ. ಚೇಸಿಂಗ್ ವೇಳೆ ಗೋಕಳ್ಳರು ವಾಹನದಲ್ಲಿದ್ದ ಗೋವುಗಳನ್ನು ಹೊರಕ್ಕೆ ದಬ್ಬಿದ್ದಾರೆ ಎನ್ನಲಾಗಿದೆ.
ಚೇಸಿಂಗ್ ವೇಳೆ ಫೈರಿಂಗ್ ನಡೆದಿದೆ. ಕೊನೆ ಬುಲೆಟ್ ಗೋರಕ್ಷಕರ ವಾಹನದ ಮೇಲೆ ಬಿದ್ದಿದ್ದು, ಒಬ್ಬರನ್ನು ಘಾಸಿಗೊಳಿಸಿದೆ. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 6 ಗೋಕಳ್ಳರನ್ನು ಗುರುತಿಸಲಾಗಿದೆ, ಅವರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಶೋಧ ಕಾರ್ಯ ಮುಂದುವರೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.