ನವದೆಹಲಿ: 1990 ರಲ್ಲಿ ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಮಾಡಿಸಿದ ದಾಳಿಯಿಂದ ಹತ್ಯೆಯಾಗಿರುವ ದಿವಂಗತ ಸ್ಕ್ವಾಡ್ರನ್ ಲೀಡರ್ ರವಿ ಖನ್ನಾ ಅವರ ಹೆಸರನ್ನು ಪ್ರತಿಷ್ಠಿತ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಸೇರಿಸಲು ನಿರ್ಧರಿಸಿದ ರಕ್ಷಣಾ ಸಚಿವಾಲಯ ಮತ್ತು ಭಾರತೀಯ ವಾಯುಪಡೆ ನಿರ್ಧರಿಸಿದೆ. ಇದಕ್ಕಾಗಿ ಖನ್ನಾ ಅವರ ಪತ್ನಿ ನಿರ್ಮಲಾ ಖನ್ನಾ ಪ್ರಧಾನಿ, ರಕ್ಷಣಾ ಸಚಿವಾಲಯ ಮತ್ತು ವಾಯುಸೇನೆಗೆ ಧನ್ಯವಾದಗಳನ್ನು ಅರ್ಪಣೆ ಮಾಡಿದ್ದಾರೆ.
ಮಹತ್ವದ ನಿರ್ಧಾರ ತೆಗೆದುಕೊಂಡ ವಾಯುಸೇನೆ, ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಶ್ಲಾಘಿಸಿರುವ ನಿರ್ಮಲ್ ಖನ್ನಾ, “ಸೈನಿಕನು ಸಮವಸ್ತ್ರವನ್ನು ಧರಿಸಿದಾಗಲೇ ಅದು ಶವಪೆಟ್ಟಿಗೆಯೆಂದು ಆತನಿಗೆ ತಿಳಿದಿರುತ್ತದೆ. ನಾನು ವಾಯುಪಡೆಗೆ ಮತ್ತು 130 ಕೋಟಿ ಭಾರತೀಯರಿಗೆ ಕೃತಜ್ಞಳಾಗಿದ್ದೇನೆ. ಈಗ, ಭಾರತದ ಮಗಳಾಗಿ ಸ್ವೀಕರಿಸಲ್ಪಟ್ಟಿದ್ದೇನೆ ಎಂಬ ಭಾವ ನನಗೆ ಬರುತ್ತಿದೆ” ಎಂದಿದ್ದಾರೆ.
1990 ರ ಜನವರಿ 25 ರಂದು ಕಾಶ್ಮೀರ ಕಣಿವೆಯಲ್ಲಿ ಮಲಿಕ್ ನಡೆಸಿದ ದಾಳಿಯಿಂದ ಹತ್ಯೆಗೀಡಾದ ನಾಲ್ಕು ವಾಯುಸೇನಾ ಸಿಬ್ಬಂದಿಗಳಲ್ಲಿ ಖನ್ನಾ ಕೂಡ ಒಬ್ಬರು. ಪ್ರಸ್ತುತ ಮಲಿಕ್ ಅನ್ನು ಭಯೋತ್ಪಾದನೆಗೆ ಧನಸಹಾಯ ಮತ್ತು ವಾಯುಸೇನಾ ಸಿಬ್ಬಂದಿಯ ಹತ್ಯೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸ್ಕ್ವಾಡ್ರನ್ ಲೀಡರ್ ಖನ್ನಾ ಅವರ ಹೆಸರನ್ನು ನಮೋದನೆ ಮಾಡುವ ನಿರ್ಧಾರವನ್ನು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಮಾಜಿ ವಾಯು ಮುಖ್ಯಸ್ಥ ಮಾರ್ಷಲ್ ಬಿಎಸ್ ಧನೋವಾ ಅವರ ನೇತೃತ್ವದಲ್ಲಿ ವಾಯುಸೇನೆ ತೆಗೆದುಕೊಂಡಿತು.
ಅಗಲಿದ ಮೂರು ದಶಕಗಳ ಬಳಿಕ ಖನ್ನಾ ಅವರಿಗೆ ಸಲ್ಲಬೇಕಾದ ಗೌರವ ಸಲ್ಲುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.