ನವದೆಹಲಿ: ದೆಹಲಿಯ ದ್ವಾರಕಾದಲ್ಲಿ ಜರುಗಿದ ದಸರಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭಾಗಿಯಾದರು. ಈ ವೇಳೆ ಮಾತನಾಡಿದ ಅವರು, ಮಹಿಳೆಯರ ಘನತೆ, ಗೌರವವನ್ನು ಹೆಚ್ಚಿಸಿ ಮಹಿಳಾ ಕಲ್ಯಾಣ ಕಾರ್ಯಕ್ರಮಗಳನ್ನು ಇನ್ನಷ್ಟು ಬಲಗೊಳಿಸಿ. ಈ ದೀಪಾವಳಿಯಲ್ಲಿ ಹೆಣ್ಣು ಮಕ್ಕಳನ್ನು ಸನ್ಮಾನಿಸಿ ಎಂದು ಜನರಿಗೆ ಕರೆ ನೀಡಿದರು.
“ನಮ್ಮ ಮನೆಯಲ್ಲೇ ಲಕ್ಷ್ಮಿ ಇದ್ದಾಳೆ. ನನ್ನ ಮನ್ ಕಿ ಬಾತ್ ಕಾರ್ಯಕ್ರಮದಲ್ಲೂ ನಾನು ಮನೆಯಲ್ಲಿ ಲಕ್ಷ್ಮಿ ಮನೆಯಲ್ಲಿದ್ದಾಳೆ, ನಮ್ಮ ಪ್ರದೇಶದಲ್ಲಿದ್ದಾಳೆ. ನಮ್ಮ ಹೆಣ್ಣುಮಕ್ಕಳು ಲಕ್ಷ್ಮಿಯ ಅಭಿವ್ಯಕ್ತಿಗಳು ಎಂಬುದಾಗಿ ಹೇಳಿದ್ದೆ” ಎಂದು ಪ್ರಧಾನಿ ಹೇಳಿದ್ದಾರೆ.
“ಈ ದೀಪಾವಳಿಯಂದು, ಎಲ್ಲಾ ಹೆಣ್ಣುಮಕ್ಕಳನ್ನು ಪೂಜಿಸಬೇಕು ಮತ್ತು ಗೌರವಿಸಬೇಕು. ನವರಾತ್ರಿದ ಸ್ಪೂರ್ತಿಯೊಂದಿಗೆ ಮುಂದುವರಿಯಬೇಕು, ಮಹಿಳೆಯರ ಸಬಲೀಕರಣ ಮತ್ತು ಘನತೆಯನ್ನು ಹೆಚ್ಚಿಸಲು ನಾವು ಇನ್ನ ಕೆಲಸ ಮಾಡೋಣ” ಎಂದಿದ್ದಾರೆ. ಬೇಟಿ ಬಚಾವೊ, ಬೇಟಿ ಪಡಾವೊ ನಮ್ಮ ಸರ್ಕಾರದ ಮಹತ್ವದ ಕಾರ್ಯಕ್ರಮ ಎಂದರು.
“ನಮ್ಮ ಹಬ್ಬಗಳು ಶಿಕ್ಷಣವನ್ನು ನೀಡುವಂತಹು. ಅಗತ್ಯವಿದ್ದಾಗ ನಾವು ನಮ್ಮನ್ನು ಬದಲಾಯಿಸಿಕೊಳ್ಳಬಹುದು, ಯಾಕೆಂದರೆ ನಮ್ಮ ಸಮಾಜದಲ್ಲಿ ದುಷ್ಟತನದ ವಿರುದ್ಧ ಹೋರಾಡುವ ಜನರಿದ್ದಾರೆ. ನಮ್ಮೊಳಗಿನ ದುಷ್ಟತನದ ವಿರುದ್ಧ ಹೋರಾಡುವುದು ಅಗತ್ಯ” ಎಂದರು.
ರಾವಣ ದಹನ ಕಾರ್ಯಕ್ರಮದಲ್ಲೂ ಮೋದಿ ಭಾಗಿಯಾಗಿದ್ದು, “ಪ್ರಭು ಶ್ರೀರಾಮನ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ. ಸತ್ಯ, ಒಳ್ಳೆಯತನ ಮತ್ತು ಸಹನೆ ಗುಣಗಳು ರಾರಾಜಿಸಲಿ. ಕೆಟ್ಟತನ ನಶಿಸಲಿ” ಎಂದು ಟ್ವಿಟ್ ಮಾಡಿದ್ದಾರೆ.
May the blessings of Prabhu Shri Ram always remain upon us.
May the power of truth, goodness and compassion always prevail.
May evil be eliminated.
Jai Shri Ram! 🙏🏼 pic.twitter.com/OCZOLsX7ug
— Narendra Modi (@narendramodi) October 8, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.