ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆದ ಸಿಆರ್ಪಿಎಫ್ ಬೆಂಗಾವಲು ಮೇಲಿನ ಆತ್ಮಾಹುತಿ ದಾಳಿಯು, ನಮ್ಮ ರಕ್ಷಣಾ ಸ್ಥಾಪನೆಗಳು ಎಲ್ಲಾ ಸಮಯದಲ್ಲೂ ಕಣ್ಗಾವಲಿನಲ್ಲಿರಬೇಕಾದ ಅವಶ್ಯಕತೆಯನ್ನು ನಮಗೆ ನೆನಪಿಸಿಕೊಟ್ಟಿತು ಎಂದು ವಾಯುಸೇನಾ ಮುಖ್ಯಸ್ಥ ಆರ್ ಕೆ ಭದೌರಿಯಾ ಹೇಳಿದ್ದಾರೆ.
ದೆಹಲಿ ಬಳಿಯ ಹಿಂಡನ್ ವಾಯುಪಡೆ ನಿಲ್ದಾಣದಲ್ಲಿ ಭಾರತೀಯ ವಾಯುಪಡೆಯ 87 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, “ನೆರೆಹೊರೆಯಲ್ಲಿನ ಪ್ರಸ್ತುತ ಭದ್ರತಾ ವಾತಾವರಣವು ಕಳವಳಕ್ಕೆ ಗಂಭೀರ ಕಾರಣವಾಗಿದೆ” ಎಂದು ಹೇಳಿದ್ದಾರೆ.
“ಪುಲ್ವಾಮಾ ದಾಳಿಯು ರಕ್ಷಣಾ ಸ್ಥಾಪನೆಗಳಿಗೆ ನಿರಂತರ ಬೆದರಿಕೆ ಇರುವುದನ್ನು ನೆನಪಿಸಿಕೊಡುತ್ತದೆ” ಎಂದು ಏರ್ ಚೀಫ್ ಮಾರ್ಷಲ್ ಭದೌರಿಯಾ ಹೇಳಿದ್ದಾರೆ. ಫೆಬ್ರವರಿಯಲ್ಲಿ ಪುಲ್ವಾಮಾದ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸಿಆರ್ಪಿಎಫ್ನ 40 ಸೈನಿಕರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತ ವೈಮಾನಿಕ ದಾಳಿಯನ್ನು ನಡೆಸಿತ್ತು.
ಪಾಕಿಸ್ಥಾನದ ಬಾಲಕೋಟ್ನಲ್ಲಿರುವ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಶಿಬಿರದ ಮೇಲೆ ಬಾಂಬ್ ಸ್ಫೋಟಿಸುವ ನಿರ್ಧಾರವು ರಾಷ್ಟ್ರೀಯ ಭದ್ರತೆ ಕುರಿತ ಸರ್ಕಾರದ ವಿಧಾನದಲ್ಲಿ ಪ್ರಮುಖ ಬದಲಾವಣೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
“ಈ ಕಾರ್ಯಾಚರಣೆಯ ಕಾರ್ಯತಾಂತ್ರಿಕ ಪ್ರಸ್ತುತತೆ ಭಯೋತ್ಪಾದಕರನ್ನು ಶಿಕ್ಷಿಸುವ ರಾಜಕೀಯ ನಾಯಕತ್ವದ ಸಂಕಲ್ಪವನ್ನು ತೋರಿಸುತ್ತದೆ. ಭಯೋತ್ಪಾದಕ ದಾಳಿಯನ್ನು ನಿಭಾಯಿಸುವ ಸರ್ಕಾರದ ವಿಧಾನದಲ್ಲಿ ಪ್ರಮುಖ ಬದಲಾವಣೆಯಾಗಿದೆ ಎಂಬುದರ ಸಂಕೇತ ಇದಾಗಿದೆ” ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.