ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ, ಸ್ಕ್ವಾಡ್ರನ್ ರವಿ ಖನ್ನಾ ಅವರ ಹೆಸರನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸೇರಿಸುವ ಪ್ರಸ್ತಾಪವನ್ನು ಭಾರತೀಯ ವಾಯುಪಡೆ ಅನುಮೋದಿಸಿದೆ. 1990ರಲ್ಲಿ ಅಂದಿನ ಭಯೋತ್ಪಾದಕ ಇಂದಿನ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ನೇತೃತ್ವದ ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ ಸಂಘಟನೆ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ ಸ್ಕ್ವಾಡ್ರನ್ ಲೀಡರ್ ಖನ್ನಾ ಮತ್ತು ಇತರ ಮೂವರು ವಾಯುಸೇನಾ ಅಧಿಕಾರಿಗಳು ಹುತಾತ್ಮರಾಗಿದ್ದರು. ಶ್ರೀನಗರದ ವಾಯುಪಡೆ ನೆಲೆ ಬಳಿಯ ಕಚೇರಿಗೆ ಹೋಗುತ್ತಿದ್ದ ವೇಳೆ ಈ ಅಧಿಕಾರಿಗಳು ಕರ್ತವ್ಯದಲ್ಲಿದ್ದಾಗಲೇ ತ್ಯಾಗ ಮಾಡಿದ್ದರು.
ಇತ್ತೀಚೆಗೆ, ದಿವಂಗತ ಸ್ಕ್ವಾಡ್ರನ್ ಲೀಡರ್ ರವಿ ಖನ್ನಾ ಅವರ ಪತ್ನಿ ನಿರ್ಮಲಾ ಖನ್ನಾ ಅವರು ತಮ್ಮ ಗಂಡನ ಹೆಸರನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸೇರಿಸುವಂತೆ ಮನವಿಯನ್ನು ಮಾಡಿಕೊಂಡಿದ್ದರು.
1990ರ ಜನವರಿ 25ರಂದು ಬೆಳಿಗ್ಗೆ 7.30ರ ಸುಮಾರಿಗೆ ಉಗ್ರರು ನಿಶಸ್ತ್ರರಾಗಿದ್ದ ವಾಯುಸೇನಾ ಅಧಿಕಾರಿಗಳ ಮೇಲೆ ಗುಂಡಿನ ದಾಳಿಯನ್ನು ನಡೆಸಿದ್ದರು. ಇದರಿಂದಾಗಿ ಖನ್ನಾ ಮತ್ತು ಅವರ ಮೂವರು ಸಹೋದ್ಯೋಗಿಗಳು ಪ್ರಾಣ ತೆತ್ತಿದ್ದರು. ಘಟನೆಯಲ್ಲಿ 40 ಮಂದಿಗೆ ಗಾಯಗಳಾಗಿತ್ತು. ಈ ಘಟನೆಯ ಹಿಂದೆ ಯಾಸಿನ್ ಮಲಿಕ್ ಕೈವಾಡವಿದೆ ಎಂಬ ಬಲವಾದ ಶಂಕೆ ವ್ಯಕ್ತವಾಗಿತ್ತು, ಆದರೆ ಆತನ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.
ಯುಪಿಎ ಸರ್ಕಾರದ ದೌರ್ಬಲ್ಯದ ಫಲವಾಗಿ ಉಗ್ರನಾಗಿ ದುಷ್ಕೃತ್ಯ ಎಸಗುತ್ತಿದ್ದ ಯಾಸೀನ್ ಮಲಿಕ್ ಏಕಾಏಕಿ ಪ್ರತ್ಯೇಕತವಾದಿ ಮುಖಂಡನಾಗಿ ಮುನ್ನಲೆಗೆ ಬಂದ, ಯುಪಿಎ ನಾಯಕರುಗಳೊಂದಿಗೆ ನಿಕಟ ಸ್ನೇಹವನ್ನು ಇಟ್ಟುಕೊಂಡ. ಆದರೀಗ ನರೇಂದ್ರ ಮೋದಿ ಸರ್ಕಾರ ಆತನ ಉಗ್ರರೊಂದಿಗೆ ಸಂಬಂಧವನ್ನು ಪತ್ತೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.