ನವದೆಹಲಿ: ಹಬ್ಬದ ಸಂದರ್ಭಗಳಲ್ಲಿ ಗಂಗೆ ಮತ್ತು ಅದರ ಉಪ ನದಿಗಳು ಮಾಲಿನ್ಯವಾಗದಂತೆ ನೋಡಿಕೊಳ್ಳಬೇಕು ಮತ್ತು ಮೂರ್ತಿ ವಿಸರ್ಜನೆಗಳಿಗೆ ಅಲ್ಲಿ ಅವಕಾಶಗಳನ್ನು ನೀಡಬಾರದು ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ 15 ಅಂಶಗಳ ನಿರ್ದೇಶನವನ್ನು ರವಾನಿಸಿದೆ.
ಗಂಗೆ ಅಥವಾ ಅದರ ಉಪ ನದಿಗಳಲ್ಲಿ ಮೂರ್ತಿ ವಿಸರ್ಜನೆ ಮಾಡಿದರೆ 50 ಸಾವಿರ ರೂಪಾಯಿಗಳ ದಂಡವನ್ನು ವಿಧಿಸಲಾಗುವುದು ಎಂದು ತಿಳಿಸಿದೆ. ನ್ಯಾಷನಲ್ ಮಿಶನ್ ಫಾರ್ ಕ್ಲೀನ್ ಗಂಗಾ ಪ್ರಧಾನ ನಿರ್ದೇಶಕರಿಂದ ಈ ನಿರ್ದೇಶನ ಜಾರಿಯಾಗಿದೆ.
ಗಣೇಶ್ ಚತುರ್ಥಿ, ದಸರಾ, ಛತ್ ಪೂಜಾ ಇತ್ಯಾದಿ ಹಬ್ಬಗಳ ಸಂದರ್ಭದಲ್ಲಿ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡುವಂತೆ ರಾಜ್ಯ ಸರ್ಕಾರದ ಆಡಳಿತಗಳಿಗೆ ಆದೇಶಿಸಲಾಗಿದೆ.
ಮೂರ್ತಿ ವಿಸರ್ಜನೆಯನ್ನು ಕಡ್ಡಾಯವಾಗಿ ನಿಷೇಧ ಮಾಡಬೇಕು ಎಂದು ತಿಳಿಸಲಾಗಿದೆ. ಅಲ್ಲದೇ ಹಬ್ಬದ ಸಂದರ್ಭದಲ್ಲಿ ನದಿಗಳಿಗೆ ಕಣ್ಗಾವಲು ಇರಿಸುವಂತೆಯೂ ತಿಳಿಸಲಾಗಿದೆ.
ಅಲ್ಲದೇ ಒಳಾಂಗಣದಲ್ಲಿ ಸಿಂಥೆಟಿಕ್ ಲೈನರ್ಗಳನ್ನು ಸುಲಭವಾಗಿ ಸ್ವಚ್ಛಗೊಳಿಸಲು ಸಾಧ್ಯವಾಗುವಂತೆ ಅಳವಡಿಸಿದ ತಾತ್ಕಾಲಿಕ ಕೊಳಗಳನ್ನು ಸಮೂರ್ತಿ ವಿಸರ್ಜನೆಗಾಗಿ ಸ್ಥಾಪಿಸುವುದು ಸೇರಿದಂತೆ ಹಲವು ಪರ್ಯಾಯ ವ್ಯವಸ್ಥೆಗಳನ್ನು ಭಕ್ತರಿಗೆ ಮೂರ್ತಿ ವಿಸರ್ಜನೆಗೆ ಮಾಡಿಕೊಡುವಂತೆ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.