ಲಕ್ನೋ: ಮಹಾತ್ಮ ಗಾಂಧಿ 150ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಗಾಂಧಿ ಪ್ರತಿಮೆ ಎದುರು ಗೊಳೋ ಅಂತ ಅಳುತ್ತಾ ದೊಡ್ಡ ನಾಟಕವನ್ನೇ ಮಾಡಿದ ಸಮಾಜವಾದಿ ಮುಖಂಡ ಫಿರೋಜ್ ಖಾನ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಕ್ಯಾಮೆರಾಗಳ ಮುಂದೆ ಮಹಾತ್ಮಗಾಂಧಿ ಪ್ರತಿಮೆಯ ಕೆಳಗೆ ಫಿರೋಜ್ ಖಾನ್ ಬಿಕ್ಕಿಬಿಕ್ಕಿ ಅತ್ತಿದ್ದಾರೆ, ಸ್ವಾತಂತ್ರ್ಯವನ್ನು ಕೊಟ್ಟು ದೇಶವನ್ನು ಯಾಕೆ ಅನಾಥ ಮಾಡಿ ಹೋದಿರಿ ? ನಿಮ್ಮ ಮಕ್ಕಳಾದ ನಮ್ಮನ್ನು ನೀವು ಅನಾಥರನ್ನಾಗಿ ಮಾಡಿ ಏಕೆ ಹೊದಿರಿ ? ಎಂದು ಗೋಳಾಡಿದ್ದಾರೆ. ಅವರ ಈ ಡ್ರಾಮಾದ ವಿಡಿಯೋವನ್ನು ಪತ್ರಕರ್ತ ಆದಿತ್ಯ ಜೈರಾಂ ತಿವಾರಿಯವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಫಿರೋಜ್ ಖಾನ್ ಮಾತ್ರವಲ್ಲದೆ ಅವರ ಜೊತೆಗಿದ್ದ ಕೆಲವು ಸಹಚರರು ಕೂಡ ಇದೇ ನಾಟಕ ಮಾಡಿದ್ದಾರೆ. ಸ್ವಾತಂತ್ರ್ಯ ಕೊಟ್ಟು ಯಾಕೆ ನಮ್ಮನ್ನು ಅನಾಥ ಮಾಡಿದಿರಿ ಎಂದೆಲ್ಲ ಗೊಳೋ ಎಂದು ಅತ್ತಿದ್ದಾರೆ.
ಈ ನಾಟಕದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಹಲವಾರು ಮಂದಿ ಇದಕ್ಕೆ ಟೀಕೆ ವ್ಯಕ್ತಪಡಿಸಿದ್ದಾರೆ.
‘लोकप्रियता हासिल करने के लिए सपा जिलाध्यक्ष करते रहते है अजीबोगरीब नाटक’!
सम्भल: 2 अक्टूबर गांधी जयंती के मौके पर सपा नेताओं की नोटंकीबाज़ तस्वीरें आई सामने गांधी प्रतिमा के नीचे बैठकर कैमरे को देखते ही रोने का ढोंग करते नज़र आए सपा जिलाध्यक्ष फ़िरोज़ खान व अन्य पदाधिकारी! pic.twitter.com/7WqFNsDECA
— आदित्य जयराम तिवारी (@adityatiwaree) October 2, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.