ಮುಂಬಯಿ: ನ್ಯಾಷನಲ್ ಬಾಸ್ಕೆಟ್ಬಾಲ್ ಅಸೋಸಿಯೇಷನ್ ಇದೇ ಮೊದಲ ಬಾರಿಗೆ ಭಾರತದಲ್ಲಿ ತೇಲುವ ಬಾಸ್ಕೆಟ್ ಬಾಲ್ ಕೋರ್ಟ್ ಅನ್ನು ನಿರ್ಮಾಣ ಮಾಡಿದೆ. ಮುಂಬೈಯ ಬಾಂದ್ರಾ-ವರ್ಲಿ ಸೀಲಿಂಕ್ ಸಮೀಪದ ಅರಬ್ಬಿ ಸಮುದ್ರದಲ್ಲಿ ಈ ಕೋರ್ಟ್ ನಿರ್ಮಾಣವಾಗಿದೆ.
ಬುಧವಾರದಿಂದ ಪ್ರಾರಂಭವಾದ ಈ ತೇಲುವ ಕೋರ್ಟ್ನಲ್ಲಿ ಕ್ರೀಡಾಸಕ್ತರು ಆಟವನ್ನು ಆಡಿ ಸಂತೋಷಪಟ್ಟುಕೊಂಡರು, ಅವರಿಗೆ ಎನ್ಬಿಎ ಲೆಜೆಂಡ್ ಜಾಸನ್ ವಿಲಿಯಮ್ಸ್ ಸಾಥ್ ನೀಡಿದರು.
ಆಟದಲ್ಲಿ ಉತ್ತಮ ಸಾಧನೆಯನ್ನು ಮಾಡಬೇಕಾದರೆ ಶ್ರಮಪಟ್ಟು ಅಭ್ಯಾಸ ನಡೆಸಬೇಕು, ವಿಶ್ವದಾದ್ಯಂತ ಮಕ್ಕಳು ಈಗ ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ವಿಲಿಯಮ್ಸ್ ಯುವಕರಿಗೆ ಸಲಹೆಯನ್ನು ನೀಡಿದ್ದಾರೆ.
“ಶ್ರಮಪಡಿ ಮತ್ತು ನಿಮ್ಮೆಲ್ಲ ಸಮಯವನ್ನು ಇದಕ್ಕಾಗಿ ಮೀಸಲಿಡಿ. ಪ್ರತಿನಿತ್ಯವೂ ವಿಶ್ವದಾದ್ಯಂತದ ಮಕ್ಕಳು ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಉತ್ತಮಗೊಳ್ಳುತ್ತಿದ್ದಾರೆ. ಭಾರತ ಈ ಕ್ರೀಡೆಯಲ್ಲಿ ಒಂದೆರಡು ಹೆಜ್ಜೆ ಹಿಂದಿರಬಹುದು ಅಷ್ಟೇ, ಇದರ ಅರ್ಥ ಅವರೆಂದೂ ಸಾಧಿಸಲಾರರು ಎಂದಲ್ಲ” ಎಂದು ವಿಲಿಯಮ್ಸ್ ಹೇಳಿದ್ದಾರೆ.
2018ರ ಡಿಸೆಂಬರ್ 20 ರಂದು ಎನ್ಬಿಎ ಇಂಡಿಯಾ, ಭಾರತದಲ್ಲಿ ಮೊದಲ ಬಾರಿಗೆ ಎನ್ಬಿಎ ಕ್ರೀಡೆಯನ್ನು ಮುಂಬಯಿಯಲ್ಲಿ ಆಯೋಜನೆಗೊಳಿಸುವುದಾಗಿ ಘೋಷಣೆ ಮಾಡಿತ್ತು.
ಎನ್ಬಿಎ ಇಂಡಿಯಾ ಗೇಮ್ಸ್ 2019 ಸಾಕ್ರಮೆಂಟೋ ಕಿಂಗ್ಸ್ ಮತ್ತು ಇಂಡಿಯಾನಾ ಪೇಸರ್ಗಳನ್ನು ಒಳಗೊಳ್ಳುವಿಕೆಯೊಂದಿಗೆ ಅಕ್ಟೋಬರ್ 4 ಮತ್ತು 5 ರಂದು ಇವರು ಪ್ರೀ ಸೀಸನ್ ಗೇಮ್ ಅನ್ನು ಡೋಮ್ ಎನ್.ಸಿ.ಎಸ್.ಐ.ನ ಎಸ್.ವಿ.ಪಿ. ಸ್ಟೇಡಿಯಂನಲ್ಲಿ ಆಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.