News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಯೋತ್ಪಾದನೆಗೆ ಬೆಂಬಲ ನೀಡಿದರೆ ಪಾಕಿಸ್ಥಾನ ಛಿದ್ರವಾಗಲಿದೆ: ರಾಜನಾಥ್ ಸಿಂಗ್

ಸೂರತ್: ಭಯೋತ್ಪಾದನೆಗೆ ಬೆಂಬಲ ನೀಡಿದರೆ ಮತ್ತು ಭಯೋತ್ಪಾದಕರಿಗೆ ತನ್ನ ನೆಲದಲ್ಲಿ ಸುರಕ್ಷಿತ ನೆಲೆಯನ್ನು ಕಲ್ಪಿಸಿದರೆ ಪಾಕಿಸ್ಥಾನ ಛಿದ್ರ ಛಿದ್ರವಾಗಿ ಹೋಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಸೂರತ್‌ನಲ್ಲಿ ಭಾರತೀಯ ವೀರ ಜವಾನ್ ಟ್ರಸ್ಟ್‌ನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, “1971ರಲ್ಲಿ ಧರ್ಮದ ಆಧಾರದ ಮೇಲೆ ರಚನೆಗೊಂಡ ಪಾಕಿಸ್ಥಾನ ಬಳಿಕ ಎರಡು ಭಾಗವಾಯಿತು. ಪಾಕಿಸ್ಥಾನದಲ್ಲಿ ಧರ್ಮದ ಆಧಾರದಲ್ಲಿ ರಾಜಕೀಯ ಮುಂದುವರೆದರೆ ಅದು ಇನ್ನಷ್ಟು ಭಾಗಗಳಾಗಿ ತುಂಡಾಗುವುದನ್ನು ಯಾರೂ ತಪ್ಪಿಸಲಾರರು. ಪಾಕಿಸ್ಥಾನ ಭಯೋತ್ಪಾದನೆಯನ್ನು ಬೆಂಬಲಿಸುವುದನ್ನು ನಿಲ್ಲಿಸದೆ ಹೋದರೆ ಭವಿಷ್ಯದಲ್ಲಿ ಖಂಡಿತವಾಗಿಯೂ ಛಿದ್ರ ಛಿದ್ರವಾಗಿ ಹೋಗುತ್ತದೆ” ಎಂದಿದ್ದಾರೆ.

ಜಮ್ಮು-ಕಾಶ್ಮೀರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ಪುನರುಚ್ಚರಿಸಿದ ರಾಜನಾಥ್ ಸಿಂಗ್ ಅವರು, “ಇನ್ನು ಮುಂದೆ ಪಾಕಿಸ್ಥಾನದ ಜೊತೆ ಭಾರತ ಮಾತುಕತೆ ನಡೆಸುವುದಾದರೆ ಅದು ಕೇವಲ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ’ ಎಂದಿದ್ದಾರೆ.

“ಮಾನವ ಹಕ್ಕುಗಳ ಉಲ್ಲಂಘನೆಗಳು ನಡೆಯುತ್ತಿರುವುದು ಪಾಕಿಸ್ಥಾನದಲ್ಲಿ. ಬಲೂಚ್ ಜನರ ವಿರುದ್ಧ, ಹಿಂದೂ, ಸಿಖ್­ರ ವಿರುದ್ಧ ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಆದರೆ ಪಾಕಿಸ್ಥಾನ ಮಾತ್ರ ಭಾರತದ ಮೇಲೆ ಮಾನವ ಹಕ್ಕು ಉಲ್ಲಂಘನೆಯ ಆರೋಪವನ್ನು ಹೊರಿಸಲು ಪ್ರಯತ್ನಿಸುತ್ತಿದೆ, ಆದರೆ ಅದರ ಮಾತನ್ನು ಅಂತಾರಾಷ್ಟ್ರೀಯ ಸಮುದಾಯ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top