ನವದೆಹಲಿ: ನೀವು ಸತ್ಯವನ್ನು ತಿಳಿದುಕೊಳ್ಳಲು ಬಯಸುವುದೇ ಆದರೆ ರಾಮಸೇತು, ಸಂಸ್ಕೃತ ಮತ್ತು ಆಯುರ್ವೇದಗಳ ಬಗ್ಗೆ ಸಂಶೋಧನೆಯನ್ನು ಮಾಡಿ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಖ್ ಅವರು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಲಹೆಯನ್ನು ನೀಡಿದ್ದಾರೆ.
ಮಂಗಳವಾರ ಐಐಟಿ-ಖರಗ್ಪುರದ 65 ನೇ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಪೋಖ್ರಿಯಾಲ್, “ದೇಶದ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯು ಆಧ್ಯಾತ್ಮಿಕತೆಯ ಅಡಿಪಾಯವನ್ನು ಹೊಂದಿದೆ. ಜಗತ್ತು ಯೋಗ, ವೇದ ಮತ್ತು ಆಯುರ್ವೇದವನ್ನು ಗಮನಿಸುತ್ತಿದೆ” ಎಂದರು.
“ಸಂಸ್ಕೃತವು ವಿಶ್ವದ ಅತ್ಯಂತ ಹಳೆಯ ಭಾಷೆಯಾಗಿದೆ. ಇಲ್ಲಿಯವರೆಗೆ, ಸಂಸ್ಕೃತವನ್ನು ಹೊರತುಪಡಿಸಿ ಬೇರೆ ಯಾವುದೇ ಭಾಷೆಯ ಅಸ್ತಿತ್ವವನ್ನು ಯಾರಿಗೂ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಈ ಮಾತನ್ನು ಹೇಳಿದರೆ ಜನರು ನಮ್ಮನ್ನು ಗೇಲಿ ಮಾಡುತ್ತಾರೆ, ಆದ್ದರಿಂದ ಜೌಟ್ ಗೋಯಿಂಗ್ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಹೊಸ ಸಂಶೋಧನೆಯನ್ನು ನಡೆಸಿ ಅದನ್ನು ಸಾಬೀತುಪಡಿಸುವಂತೆ ನಾನು ಮನವಿ ಮಾಡಿಕೊಳ್ಳುತ್ತೇನೆ” ಎಂದಿದ್ದಾರೆ.
ರಾಮ ಸೇತು ಬಗ್ಗೆ ಉಲ್ಲೇಖಿಸಿದ ಅವರು,“ ನಾವು ಹಿಂತಿರುಗಿ ನೋಡಿದಾಗ, ನಮ್ಮ ಎಂಜಿನಿಯರ್ಗಳು ರಾಮ ಸೇತುವನ್ನು ಹೇಗೆ ನಿರ್ಮಿಸಿದರು ಎಂಬ ಕಥೆ ನಮಗೆ ನೆನಪಿಗೆ ಬರುತ್ತದೆ. ನಮ್ಮ ಮುಂಬರುವ ಎಂಜಿನಿಯರ್ಗಳು ಈ ಬಗೆಗಿನ ಅಧ್ಯಯನವನ್ನು ಪರಿಶೀಲಿಸಬೇಕು. ರಾಮ ಸೇತು ಬಗೆಗಿನ ಗುಪ್ತ ಸತ್ಯವನ್ನು ಕಂಡುಹಿಡಿಯಲು ಅವರು ಹೊಸ ಸಂಶೋಧನೆಗಳನ್ನು ನಡೆಸಬೇಕು” ಎಂದಿದ್ದಾರೆ.
“ರಾಮ ಸೇತುವಿನಂತಹ ಪಾರಂಪರಿಕ ಅದ್ಭುತಗಳನ್ನು ಅಧ್ಯಯನ ಮಾಡಲು ಮತ್ತು ಪತ್ತೆ ಮಾಡಲು ಸಂಶೋಧನೆಗಳು ನಡೆಯಬೇಕು, ಇದರಿಂದ ನಾವು ಯುಗಗಳ ಹಿಂದೆ ಏನನ್ನು ನಿರ್ಮಿಸಿದ್ದೇವೆ ಎಂಬುದು ಜಗತ್ತಿನ ಅರಿವಿಗೆ ಬರುತ್ತದೆ” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.