ನವದೆಹಲಿ: ಸಂಸತ್ತಿನಲ್ಲಿ ಇಂದು ಋಣಬಾಧ್ಯತೆ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ 2019 (Insolvency and Bankruptcy Code (amendment) Bill 2019) ಅನ್ನು ಅಂಗೀಕರಿಸಲಾಗಿದೆ. ಈ ಮಸೂದೆಯ 5 ಸೆಕ್ಷನ್ಗಳಿಗೆ 8 ತಿದ್ದುಪಡಿಗಳನ್ನು ತರಲಾಗಿದೆ.
ಈ ಮೊದಲು ರಾಜ್ಯಸಭೆಯಲ್ಲಿ ಈ ಮಸೂದೆ ಅಂಗೀಕಾರಗೊಂಡಿದೆ. ಈ ಮಸೂದೆಗೆ ತಂದ ತಿದ್ದುಪಡಿಗಳ ಬಗ್ಗೆ ಇಂದು ಲೋಕಸಭೆಯಲ್ಲಿ ಸುದೀರ್ಘ ಮೂರು ಗಂಟೆಗಳವರೆಗೆ ಚರ್ಚೆ ನಡೆದಿತ್ತು. ಬಳಿಕ ಅಂಗೀಕಾರವನ್ನು ಪಡೆದುಕೊಂಡಿದೆ.
ಸರ್ಕಾರ ತಂದ ತಿದ್ದುಪಡಿಗಳ ಕುರಿತ ಚರ್ಚೆಗಳಿಗೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಉತ್ತರಿಸಿದ ನಂತರ ಕೆಳಮನೆ ಮಸೂದೆಗೆ ಅನುಮೋದನೆ ನೀಡಿತು. ಈ ಮಸೂದೆಯ ಏಳು ವಿಭಾಗಗಳಿಗೆ ಎಂಟು ತಿದ್ದುಪಡಿಗಳನ್ನು ತರಲಾಗಿದೆ.
ಈ ಮಸೂದೆಯ ಇತರ ವಿಶೇಷತೆಗಳೆಂದರೆ, ದಿವಾಳಿತನ ಪ್ರಕರಣಗಳಲ್ಲಿ ಸಮಯೋಚಿತವಾಗಿ ಮಧ್ಯ ಪ್ರವೇಶ ಮಾಡುವುದು ಮತ್ತು 330 ದಿನಗಳ ಹೊಸ ಗಡುವಿನೊಳಗೆ ಪ್ರಕ್ರಿಯೆ ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಮಸೂದೆ ಪ್ರಯತ್ನಿಸುತ್ತದೆ (ಈ ಹಿಂದೆ ಗಡುವು 270 ದಿನಗಳಾಗಿತ್ತು). ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಯ ಅಡಿಯ ರೆಸಲ್ಯೂಶನ್ ಯೋಜನೆಯಡಿ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳು ಒಳಗೊಂಡಿರುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.