ನವದೆಹಲಿ: ದೇಶದಲ್ಲಿ ಭಾರೀ ಪ್ರಮಾಣದಲ್ಲಿ ನಗದು ವ್ಯವಹಾರ ನಡೆಯುತ್ತಿದ್ದು, ಜನರು ನೋಟು ಬದಲಾವಣೆ ಸಂದರ್ಭ ನ್ಯಾಯೋಚಿತವಾಗಿ ತಮ್ಮ ಪಾಲಿನ ಹಣಕ್ಕಿಂತ ಹೆಚ್ಚಿನ ಹಣ ವಿನಿಮಯ ಮಾಡದೇ ಇರುವುದನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕ್ಗಳಲ್ಲಿ ಅಳಿಸಲಾಗದಂತಹ ಶಾಯಿ ಬಳಸಲಾಗುವುದು ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಬ್ಯಾಂಕ್ಗಳಲ್ಲಿ ವಾರಕ್ಕೆ ರೂ.4,500 ಮಾತ್ರ ಬದಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಜನರು ಮರು ಮತದಾನ ನಡೆಸದಂತೆ ಬಳಸಲಾಗುವ ಇಂಕ್ನಂತೆ ಬ್ಯಾಂಕ್ಗಳಲ್ಲಿ ಹೊಸ ನೋಟು ಬದಲಾವಣೆ ವೇಳೆ ಅಳಿಸಲಾಗದ ಇಂಕ್ ಸ್ಟ್ಯಾಂಪ್ ಬಳಸಲಾಗುವುದು. ಜನ್ ಧನ್ ಖಾತೆ ಅಡಿಯಲ್ಲಿ ಕಪ್ಪು ಹಣದ ಠೇವಣಿಯನ್ನು ಪರಿಶೀಲಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಜನ್ ಧನ್ ಖಾತೆ ಅಡಿಯಲ್ಲಿ ಗ್ರಾಮೀಣ ಪ್ರದೇಶದ ಬಡ ಜನರಿಗೆ ಕೇವಲ ೫೦,೦೦೦ ರೂ. ಠೇವಣಿ ಮಾಡುವ ಮಿತಿ ಇದ್ದು, ಕಪ್ಪು ಹಣ ಹೊಂದಿದವರು ಇಂತಹವರಿಗೆ ಕಿರುಕುಳ ನೀಡುತ್ತಿದ್ದಾರೆ ಅಥವಾ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ನಿರ್ಲಜ್ಜ ಜನರು ಕಪ್ಪು ಹಣ ಪರಿವರ್ತಿಸಲು ತಂಡಗಳನ್ನು ರೂಪಿಸಿ ಹಣ ವಿನಿಮಯಕ್ಕೆ ವಿವಿಧ ಬ್ಯಾಂಕ್ಗಳಿಗೆ ಕಳುಹಿಸುತ್ತಿದ್ದಾರೆ. ಅದಕ್ಕಾಗಿ ಜನರು ನೋಟು ಬದಲಾವಣೆಗೆ ಮತ್ತೆ-ಮತ್ತೆ ಬರುತ್ತಿದ್ದಾರೆ ಎಂದು ವಿದೇಶಂಗ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.