ಮಂಗಳೂರು : ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ (PMKY) ಭಾರತ ಸರ್ಕಾರದಿಂದ ‘ಗುಣಶ್ರೀ ಕೌಶಲ್ಯ ಅಭಿವೃದ್ಧಿ ಕೇಂದ್ರ ಮಂಗಳೂರಿಗೆ ಹೊಲಿಗೆ ಯಂತ್ರ ಮತ್ತು ಕೈ ಕಸೂತಿ ತರಬೇತಿಗೆ ಕೇಂದ್ರವನ್ನು ತೆರೆಯಲು ಅನುಮತಿಯನ್ನು ನೀಡಲಾಗಿದೆ. ಈ ಕೇಂದ್ರದ ಮೂಲಕ ಹೊಲಿಗೆ ಯಂತ್ರ ತರಬೇತಿಗೆ 30 ಜನರಿಗೆ ಹಾಗೂ ಕೈಕಸೂತಿ ತರಬೇತಿಗೆ 30 ಜನರಿಗೆ ತರಬೇತಿ ನೀಡಲು ಅವಕಾಶ ಕಲ್ಪಿಸಲಾಗಿದೆ.
ಈಗಾಗಲೇ ಈ ತರಬೇತಿಯು ಮಿಫ್ಟ್ ಕಾಲೇಜಿನಲ್ಲಿರುವ ಗುಣಶ್ರೀ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ಪ್ರಾರಂಭಿಸಲಾಗಿದೆ. ಒಟ್ಟು 120 ಗಂಟೆಗಳ 1 ತಿಂಗಳ ತರಬೇತಿ ಇಲ್ಲಿ ನಡೆಯಲಾಗುವುದು. ನಂತರ ಪರೀಕ್ಷೆಯು ನಡೆಯಲಿದ್ದು ಇದಕ್ಕೆ PMKY ವತಿಯಿಂದ ಮೌಲ್ಯಮಾಪನ ನಡೆಯಲಿದೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಕೌಶಲ್ಯ ಕಾರ್ಡ್ ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಈ ಯೋಜನೆಯಲ್ಲಿ ತರಬೇತಿ ಪಡೆಯಲು 18 ವರ್ಷ ಮೇಲ್ಪಟ್ಟವರಿಗೆ ಅವಕಾಶವಿರುತ್ತದೆ.
ಈ ಕೇಂದ್ರದ ಉದ್ಘಾಟನೆಯು ದಿನಾಂಕ 16-04-2016 ರಂದು ಅತ್ತಾವರದ ಮಿಫ್ಟ್ ಕಾಲೇಜಿನ ಸಭಾಂಗಣದಲ್ಲಿ ಬೆಳಗ್ಗೆ 10.30 ಕ್ಕೆ ನಡೆಯಲಿದೆ. ಕೇಂದ್ರದ ಉದ್ಘಾಟನೆಯನ್ನು ಸಂಸದ ನಳಿನ್ ಕುಮಾರ್ ಕಟೀಲು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಡಾ. ಟಿ.ಡಿ. ಕೆಂಪರಾಜು ಕುಲಸಚಿವರು ಮಂಗಳೂರು ವಿಶ್ವವಿದ್ಯಾಲಯ, ಅಧ್ಯಕ್ಷತೆಯನ್ನು ಮಾಜಿ ಸಚಿವರಾದ ಬಿ.ನಾಗರಾಜ ಶೆಟ್ಟಿಯವರು ವಹಿಸಲಿದ್ದಾರೆ. ವೇದಿಕೆಯಲ್ಲಿ ಮಿಫ್ಟ್ ಕಾಲೇಜಿನ ನಿರ್ದೇಶಕರಾದ ಎಂ.ಜಿ. ಹೆಗಡೆ, ಹಣಕಾಸು ಅಧಿಕಾರಿ ಮನೋಹರ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಕು. ಚಂದ್ರಲೇಖ ಗೌಡ ಉಪಸ್ಥಿತರಿರುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.