ಆಗ್ರಾ: ದೊಡ್ಡ ಪ್ರಮಾಣದ ಅಕ್ರಮ ಧಾರ್ಮಿಕ ಮತಾಂತರ ಜಾಲದಲ್ಲಿ ಬಂಧಿತನಾಗಿರುವ ವ್ಯಕ್ತಿಯೊಬ್ಬ ತಾನು ಮತಾಂತರದ ಬಲಿಪಶುವಾಗಿದ್ದು, ಮತ್ತೆ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಬಯಸಿರುವುದಾಗಿ ಸೋಮವಾರ ತಿಳಿಸಿದ್ದಾನೆ. ಕಳೆದ ಶನಿವಾರ ‘ಲವ್ ಜಿಹಾದ್’ ಪ್ರಕರಣದಲ್ಲಿ ಆರು ರಾಜ್ಯಗಳಿಂದ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ 10 ಜನರಲ್ಲಿ ಮೊಹಮ್ಮದ್ ಅಲಿ ಕೂಡ ಒಬ್ಬ.
33 ಮತ್ತು 18 ವರ್ಷ ವಯಸ್ಸಿನ ಇಬ್ಬರು ಸಹೋದರಿಯರು ಕಾಣೆಯಾದ ನಂತರ ಮಾರ್ಚ್ನಲ್ಲಿ ಆಗ್ರಾದಲ್ಲಿ ತನಿಖೆ ಪ್ರಾರಂಭವಾಯಿತು. ‘ಲವ್ ಜಿಹಾದ್’ ಮತ್ತು ಮೂಲಭೂತವಾದದಲ್ಲಿ ತೊಡಗಿರುವ ಗ್ಯಾಂಗ್ ಈ ಸಹೋದರಿಯರನ್ನು ಗುರಿಯಾಗಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆಗಳು ಕಂಡುಕೊಂಡಿವೆ ಎಂದು ಆಗ್ರಾ ಪೊಲೀಸ್ ಆಯುಕ್ತ ದೀಪಕ್ ಕುಮಾರ್ ಹೇಳಿದ್ದಾರೆ.
“ಅಮೆರಿಕ ಮತ್ತು ಕೆನಡಾದಿಂದ ಆರೋಪಿಗಳ ಹಣ ಬಂದ ಬಗ್ಗೆ ನಮಗೆ ಸುಳಿವು ಸಿಕ್ಕಿದೆ” ಎಂದಿದ್ದಾರೆ.
ಮತಾಂತರಗೊಳ್ಳುವ ಮೊದಲು ಪಿಯೂಷ್ ಪನ್ವರ್ ಆಗಿದ್ದ ರಾಜಸ್ಥಾನ ಮೂಲಕ ಅಲಿ, ಮತಾಂತರ ಜಾಲದ ಬಗ್ಗೆ ಪೊಲೀಸರಿಗೆ ಸಾಕಷ್ಟು ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಆಗ್ರಾ ಜೈಲಿನಲ್ಲಿದ್ದ ಅವನು, ಪೊಲೀಸರ ಆರಂಭಿಕ ವಿಚಾರಣೆಯ ಸಮಯದಲ್ಲಿ ಮನನೊಂದು ಮಾತೃ ಧರ್ಮಕ್ಕೆ ಮರಳಲು ಬಯಸಿದ್ದ. ಇಸ್ಲಾಂಗೆ ಮತಾಂತರಗೊಂಡ ನಂತರ ತಮ್ಮೊಂದಿಗಿನ ಸಂಬಂಧವನ್ನು ಮುರಿದುಕೊಂಡ ಪೋಷಕರಲ್ಲಿ ಕ್ಷಮೆಯಾಚಿಸಲು ಬಯಸುವುದಾಗಿ ಹೇಳಿದ್ದ ಎನ್ನಲಾಗಿದೆ.
ಪಿಯೂಷ್ ಪನ್ವರ್ ಮೊಹಮ್ಮದ್ ಅಲಿಯಾದದ್ದು ಹೇಗೆ?
ಪಿಯೂಷ್ ಪನ್ವರ್ ಮೊಹಮ್ಮದ್ ಅಲಿಯಾದ ಕಥೆ 2021 ರಲ್ಲಿ ರಾಜಸ್ಥಾನದ ಟೋಂಕ್ನ ಮಹಿಳೆ ಶಾನಾ ಎಂಬಾಕೆಯನ್ನು ಭೇಟಿಯಾದ ದಿನದಿಂದ ಪ್ರಾರಂಭವಾಯಿತು. ನಂತರ ಅವರು ಪ್ರೀತಿಯಲ್ಲಿ ಬಿದ್ದು ಮದುವೆಯಾಗಲು ನಿರ್ಧರಿಸಿದರು ಎಂದು ಮೂಲಗಳು ತಿಳಿಸಿವೆ.
ಆದಾಗ್ಯೂ, ಶಾನಾ ಷರತ್ತನ್ನು ಹಾಕಿ ಇಸ್ಲಾಂ ಧರ್ಮವನ್ನು ಸ್ವೀಕರಿಸಬೇಕಾಗುತ್ತದೆ ಎಂದು ಹೇಳಿದ್ದಾಳೆ. ಪಿಯೂಷ್ ಒಪ್ಪಿಕೊಂಡು ಅದೇ ವರ್ಷದಲ್ಲಿ ತನ್ನ ಹೆಸರನ್ನು ಮೊಹಮ್ಮದ್ ಅಲಿ ಎಂದು ಬದಲಾಯಿಸಿಕೊಂಡಿದ್ದಾನೆ. ನಂತರ ತನ್ನವರೊಂದಿಗಿನ ಎಲ್ಲಾ ಸಂಬಂಧವನ್ನು ಕಡಿದುಕೊಂಡಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.