ನವದೆಹಲಿ: ಸೃಜನಾತ್ಮಕ ಅಭಿವ್ಯಕ್ತಿಯ ಮೂಲಕ ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಜನರನ್ನು ಹೆಚ್ಚು ಭಾಗವಹಿಸುವಂತೆ ಮಾಡುವ ಉದ್ದೇಶದಿಂದ ಚುನಾವಣಾ ಆಯೋಗವು ಉಪಕ್ರಮವನ್ನು ಹೊರ ತಂದಿದೆ. ಅದುವೇ ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆ ʼನನ್ನ ಮತ ನನ್ನ ಭವಿಷ್ಯ – ಒಂದು ಮತದ ಶಕ್ತಿʼ.
ಸ್ಪರ್ಧೆಯು ರಸಪ್ರಶ್ನೆ ಸ್ಪರ್ಧೆ, ಘೋಷವಾಕ್ಯ ಸ್ಪರ್ಧೆ, ಹಾಡಿನ ಸ್ಪರ್ಧೆ, ವೀಡಿಯೊ ತಯಾರಿಕೆ ಸ್ಪರ್ಧೆ ಮತ್ತು ಪೋಸ್ಟರ್ ವಿನ್ಯಾಸ ಸ್ಪರ್ಧೆಯನ್ನು ಒಳಗೊಂಡಿರುತ್ತದೆ, ಇದು ಎಲ್ಲಾ ವಯೋಮಾನದವರಿಗೆ ಮುಕ್ತವಾಗಿದೆ. ಈ ವರ್ಷದ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನದ ಸಂದರ್ಭದಲ್ಲಿ ಈ ಉಪಕ್ರಮವನ್ನು ಪ್ರಾರಂಭಿಸಲಾಗಿದೆ. ಸ್ಪರ್ಧೆಯ ನಮೂದುಗಳನ್ನು ಮಾರ್ಚ್ 15, 2022 ರವರೆಗೆ ಕಳುಹಿಸಬಹುದು. ವಿಜೇತರಿಗೆ ಸೂಕ್ತವಾಗಿ ನಗದು ಬಹುಮಾನಗಳು ಮತ್ತು ಸರಕುಗಳನ್ನು ನೀಡಲಾಗುತ್ತದೆ.
ಸ್ಪರ್ಧೆಯು ಎಲ್ಲಾ ವರ್ಗದ ಮತದಾರರಿಗೆ ಸಂಬಂಧಿಸಿದ ಮೂಲಭೂತ ಮತ್ತು ಪ್ರಮುಖ ಮಾಹಿತಿಯಾದ ಮತದಾರರ ಪಟ್ಟಿ, ಎಲೆಕ್ಟ್ರಾನಿಕ್ ಮತದಾನ ಯಂತ್ರ ಮತ್ತು VVPAT, ಚುನಾವಣಾ ಕಾನೂನು ಮತ್ತು ಭಾರತದಲ್ಲಿನ ಚುನಾವಣೆಗಳ ಇತಿಹಾಸಕ್ಕೆ ಸಂಬಂಧಿಸಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.