ನವದೆಹಲಿ: ದೇಶದಲ್ಲಿ ಹಬ್ಬಗಳ ಸಂಭ್ರಮ ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ದೇಶದ ದೊಡ್ಡ ದೊಡ್ಡ ನಗರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಂಚು ರೂಪಿಸಿದ್ದ 6 ಮಂದಿ ಉಗ್ರರನ್ನು ನವದೆಹಲಿ ಪೊಲೀಸರ ವಿಶೇಷ ವಿಭಾಗ ಬಂಧಿಸಿದೆ. ಇವರಲ್ಲಿ ಇಬ್ಬರು ಉಗ್ರರಿಗೆ ಪಾಕಿಸ್ಥಾನದಲ್ಲಿ ತರಬೇತಿ ನೀಡಲಾಗಿತ್ತು ಎಂಬ ಅಂಶವೂ ಬಯಲಾಗಿದೆ.
ಬಂಧಿತ ಉಗ್ರರಿಗೆ ಪಾಕಿಸ್ಥಾನದ ಉಗ್ರ ಕಸಬ್ಗೆ ಸಿಕ್ಕಿದ್ದ ಕ್ಯಾಂಪ್ನಲ್ಲೇ ತರಬೇತಿ ನೀಡಲಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ. ಬಂಗಾಳಿ ಭಾಷೆ ಮಾತನಾಡುವ ಇಬ್ಬರು ಬಂಧಿತ ಉಗ್ರಗಾಮಿಗಳನ್ನು ತೀವ್ರ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಈ ಕುಕೃತ್ಯಗಳ ಸಂಚಿನ ಹಿಂದೆ ಪಾಕಿಸ್ಥಾನದ ಕೈವಾಡವಿರುವುದು ಬಯಲಾಗಿದೆ. ಹಾಗೆಯೇ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರ ಅನೀಸ್ ಈ ಶಂಕಿತ ದಾಳಿಗೆ ಅಗತ್ಯ ಶಸ್ತ್ರಾಸ್ತ್ರಗಳನ್ನು ಮತ್ತು ಸ್ಫೋಟಕಗಳನ್ನು ಹೊಂದಿಸಿದ್ದರು ಎಂಬ ವಿಚಾರವನ್ನು ಸಹ ಪೊಲೀಸರು ತಿಳಿದುಕೊಂಡಿದ್ದಾರೆ.
ಈ ಉಗ್ರಗಾಮಿಗಳು ಸುಧಾರಿತ ಸ್ಫೋಟಕ ಸಾಧನಗಳು, ಟೈಮ್ ಬಾಂಬ್ಗಳ ತಯಾರಿಕಾ ಪರಿಣತಿಯನ್ನು ಪಡೆದಿರುವುದಾಗಿಯೂ ಪೊಲೀಸರ ತನಿಖೆಯ ವೇಳೆ ತಿಳಿದು ಬಂದಿದೆ. ಗಣಪತಿ ಚತುರ್ಥಿಯನ್ನೇ ಗುರಿಯಾಗಿಸಿಕೊಂಡು ಈ ಸ್ಫೋಟಕ ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.