ನವದೆಹಲಿ: ಚೀನಾದೊಂದಿಗಿನ ಇತ್ತೀಚಿನ ಗಡಿ ವಿವಾದಗಳ ಹಿನ್ನೆಲೆಯಲ್ಲಿ, ಚೀನಾದ ಸೈನ್ಯವು ಭಾರತದ ಭೂಪ್ರದೇಶಗಳಿಗೆ ಒಳನುಗ್ಗದಂತೆ ತಡೆಯಲು ಭಾರತೀಯ ಸೇನೆಯು ಲಡಾಖ್ನ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್ಎಸಿ)ನಲ್ಲಿ ಹೆಚ್ಚುವರಿ ಜಾಗರೂಕತೆಯನ್ನು ವಹಿಸಿದೆ. ಎಲ್ಎಸಿಯಲ್ಲಿ ಚೀನಾದ ಸೈನ್ಯದ ಒಳನುಸುಳುವಿಕೆಯನ್ನು ತಡೆಗಟ್ಟಲು ಭಾರತೀಯ ಸೇನೆಯು ಮುಂದಿನ ದಿನಗಳಲ್ಲಿ ಬಲವಾದ ಕ್ರಮಗಳನ್ನು ತೆಗೆದುಕೊಳ್ಳಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.
ವರದಿಗಳ ಪ್ರಕಾರ, ಭಾರತೀಯ ವಾಯುಪಡೆಯ ಉನ್ನತ ಕಮಾಂಡರ್ಗಳು ಮುಂದಿನ ಬುಧವಾರದಿಂದ ಆರಂಭಗೊಳ್ಳುವ ಮೂರು ದಿನಗಳ ಸಮಾವೇಶದಲ್ಲಿ ದೇಶದ ವಾಯು ರಕ್ಷಣಾ ವ್ಯವಸ್ಥೆಯ ಸಮಗ್ರ ಪರಿಶೀಲನೆ ನಡೆಸಲು ನಿರ್ಧರಿಸಿದ್ದಾರೆ. ಚೀನಾದೊಂದಿಗಿನ ಗಡಿ ವಿವಾದದ ಹಿನ್ನೆಲೆಯಲ್ಲಿ ಲಡಾಖ್ ಪ್ರದೇಶದಲ್ಲಿ ಮೊದಲ ರಫೆಲ್ ಫೈಟರ್ ಜೆಟ್ಗಳನ್ನು ನಿಯೋಜಿಸುವ ಬಗ್ಗೆ ಐಎಎಫ್ ಕಮಾಂಡರ್ಗಳು ಚರ್ಚಿಸಲಿದ್ದಾರೆ ಎಂದು ಮಿಲಿಟರಿ ಮೂಲಗಳು ತಿಳಿಸಿವೆ.
ಆಗಸ್ಟ್ ಆರಂಭದಲ್ಲಿ ಲಡಾಖ್ ಸೆಕ್ಟರ್ನಲ್ಲಿ ಸುಮಾರು ಆರು ರಫೆಲ್ ವಿಮಾನಗಳ ಮೊದಲ ಫ್ಲೀಟ್ ನಿಯೋಜನೆ ಕುರಿತು ಸಮಾವೇಶದಲ್ಲಿ ಐಎಎಫ್ ಕಮಾಂಡರ್ಗಳು ಮಾತುಕತೆ ನಡೆಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಈ ವಿಮಾನವನ್ನು ಜುಲೈ ಅಂತ್ಯದ ವೇಳೆಗೆ ಐಎಎಫ್ ಫೈಟರ್ ಫ್ಲೀಟ್ಗೆ ಸೇರಿಸಲು ನಿರ್ಧರಿಸಲಾಗಿದೆ. “ಕಮಾಂಡರ್ಗಳು ಈ ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸುತ್ತಾರೆ ಮತ್ತು ಐಎಎಫ್ನ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುವ ಮಾರ್ಗಗಳನ್ನು ಚರ್ಚಿಸುತ್ತಾರೆ” ಎಂದು ಹೇಳಿವೆ. ಸಮಾವೇಶದ ಅಧ್ಯಕ್ಷತೆಯನ್ನು ಸೇನಾ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್ ಭದೌರಿಯಾ ವಹಿಸಲಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಐಎಎಫ್ ಕಮಾಂಡರ್ಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಹೇಳಲಾಗಿದೆ.
ಪರ್ವತ ಪ್ರದೇಶದಲ್ಲಿನ ಯಾವುದೇ ಹಠಾತ್ ಪರಿಸ್ಥಿತಿಯನ್ನು ಎದುರಿಸಲು ಉತ್ತಮವಾಗಿ ಸಿದ್ಧವಾಗಿದ್ದೇವೆ ಎಂದು ಚೀನಾಕ್ಕೆ ಸಂದೇಶ ನೀಡಲು ಐಎಎಫ್ ಕಳೆದ ಕೆಲವು ವಾರಗಳಿಂದ ಪೂರ್ವ ಲಡಾಖ್ ಪ್ರದೇಶದಲ್ಲಿ ರಾತ್ರಿ ವಾಯು ಗಸ್ತು ತಿರುಗುತ್ತಿದೆ. ರಾಜನಾಥ್ ಸಿಂಗ್ ಅವರು ಶುಕ್ರವಾರ (ಜುಲೈ 17) ಲಡಾಖ್ ಭೇಟಿಯ ಸಂದರ್ಭದಲ್ಲಿ, ಐಎಎಫ್ನ ಹಲವಾರು ಮಿಲಿಟರಿ ವ್ಯವಸ್ಥೆಗಳು ಪೂರ್ವ ಲಡಾಕ್ನ ಸ್ಟಕ್ನಾದಲ್ಲಿ ಮಿಲಿಟರಿ ವ್ಯಾಯಾಮದಲ್ಲಿ ಭಾಗವಹಿಸಿದ್ದವು. ಎತ್ತರದ ಪ್ರದೇಶದಲ್ಲಿ ಸಂಕೀರ್ಣ ಭದ್ರತಾ ಸನ್ನಿವೇಶವನ್ನು ಎದುರಿಸುವಲ್ಲಿ ಸೈನ್ಯ ಮತ್ತು ವಾಯುಪಡೆಯ ಸಂಘಟಿತ ಯುದ್ಧ ಸಾಮರ್ಥ್ಯವನ್ನು ಈ ವ್ಯಾಯಾಮದಲ್ಲಿ ಪ್ರದರ್ಶಿಸಲಾಯಿತು.
ಐಎಎಫ್ ತನ್ನ ಎಲ್ಲಾ ಮುಂಚೂಣಿಯ ಯುದ್ಧ ವಿಮಾನಗಳಾದ ಸುಖೋಯ್ 30 ಎಂಕೆಐ, ಜಾಗ್ವಾರ್, ಮಿರಾಜ್ 2000 ಅನ್ನು ಪೂರ್ವ ಲಡಾಕ್ನ ಪ್ರಮುಖ ಗಡಿನಾಡಿನ ಐಎಎಫ್ ನೆಲೆಗಳಲ್ಲಿ ಮತ್ತು ಎಲ್ಎಸಿಯ ಉದ್ದಕ್ಕೂ ಇರುವ ಸ್ಥಳಗಳಲ್ಲಿ ನಿಯೋಜಿಸಿದೆ. ಸೈನ್ಯವನ್ನು ವಿವಿಧ ಮುಂಚೂಣಿ ಸ್ಥಳಗಳಿಗೆ ಸಾಗಿಸಲು ಅಪಾಚೆ ದಾಳಿ ಹೆಲಿಕಾಪ್ಟರ್ಗಳು ಮತ್ತು ಚಿನೂಕ್ ಹೆಲಿಕಾಪ್ಟರ್ಗಳನ್ನು ಸಹ ಐಎಎಫ್ ನಿಯೋಜಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.