ಮಾಸ್ಕೋ: ಕೇಂದ್ರ ಸರ್ಕಾರದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಏರ್ ಇಂಡಿಯಾದ 7ನೇ ವಿಮಾನವು ರಷ್ಯಾದ ಮಾಸ್ಕೋದಿಂದ ಸುಮಾರು 143 ಭಾರತೀಯರನ್ನು ಹೊತ್ತು ಭಾರತಕ್ಕೆ ಆಗಸುತ್ತಿದೆ. ಈ ಬಗ್ಗೆ ಮಾಸ್ಕೋದಲ್ಲಿನ ಭಾರತೀಯ ರಾಯಭಾರ ಕಛೇರಿ ಮಾಹಿತಿ ನೀಡಿದೆ.
ಟ್ವೀಟ್ ಮಾಡಿರುವ ಭಾರತೀಯ ರಾಯಭಾರ ಕಛೇರಿ, “ವಂದೇ ಭಾರತ್ ಮಿಷನ್-ಮಾಸ್ಕೋದಿಂದ ಗಯಾಗೆ 143 ಭಾರತೀಯರನ್ನು ಹೊತ್ತು ವಿಮಾನ ಇಂದು ಪ್ರಯಾಣ ಆರಂಭಿಸಿದೆ” ಎಂದಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ʼವಂದೇ ಭಾರತ್ ಮಿಷನ್ʼ ಅಡಿಯಲ್ಲಿ ಮೇ 6ರಿಂದ ಇದುವರೆಗೆ ವಿದೇಶಿದ ನಾನಾ ಭಾಗಗಳಿಂದ ಸುಮಾರು 57,000 ನಾಗರಿಕರನ್ನು ಭಾರತಕ್ಕೆ ಕರೆ ತರಲಾಗಿದೆ. ಕರೋನವೈರಸ್ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ನಿರ್ಬಂಧಗಳು ಇರುವುದರಿಂದ ಸರ್ಕಾರವೇ ವಿಮಾನಗಳನ್ನು ಕಳುಹಿಸಿ ಭಾರತೀಯರನ್ನು ವಾಪಾಸ್ ಕರೆ ತರುತ್ತಿದೆ.
ಮೇ7ರಿಂದ ಈ ಕಾರ್ಯಾಚರಣೆ ಆರಂಭವಾಯಿತು, ಮೇ.16ರಿಂದ 2ನೇ ಹಂತದ ಕಾರ್ಯಾಚರಣೆ ಆರಂಭವಾಗಿದೆ. ವಿದೇಶಾಂಗ ಸಚಿವಾಲಯವು ಎರಡನೇ ಹಂತದ ಮಿಷನ್ ಅನ್ನು ಜೂನ್ 11ರವರೆಗೆ ವಿಸ್ತರಿಸಿರುವುದಾಗಿ ಘೋಷಣೆ ಮಾಡಿದೆ ಎಂದು ವರದಿಗಳು ತಿಳಿಸಿವೆ.
ಜೂನ್11-30ರವರೆಗೆ ಮೂರನೇ ಹಂತದಡಿಯಲ್ಲಿ ಭಾರತವು ಯುಎಸ್ ಮತ್ತು ಕೆನಡಾಗೆ ವಿಮಾನಗಳನ್ನು ಕಳುಹಿಸಿ ಭಾರತೀಯರನ್ನು ವಾಪಾಸ್ ಕರೆತರಲಿದೆ ಎಂದು ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.