ಬೆಳ್ತಂಗಡಿ : ಮಲವಂತಿಗೆಗ್ರಾಮ ಪಂಚಾಯತು ವ್ಯಾಪ್ತಿಯ ಕುಕ್ಕಾವು ಎಂಬಲ್ಲಿ ನಾಗಬನವೊಂದಕ್ಕೆ ಕಿಡಿಗೇಡಿಗಳು ದನದ ಮಾಂಸ ಹಾಗು ಮಾಂಸದ ತ್ಯಾಜ್ಯವನ್ನುತಂದೆಸೆದ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
ರಾತ್ರಿ ಎಂಟು ಗಂಟೆಯ ಸುಮಾರಿಗೆ ಪಿಕಪ್ ವಾಹನದಲ್ಲಿ ಬಂದ ಕಿಡಿಗೇಡಿಗಳ ತಂಡ ಇದನ್ನುಎಸೆದು ಪರಾರಿಯಾಗಿದ್ದಾರೆ. ಸ್ಥಳೀಯರು ಇದನ್ನು ಗಮನಿಸಿದ್ದು ಬಂದು ನೋಡಿದಾಗ ದನದ ಮಾಂಸ, ರುಂಡ ಇತ್ಯಾದಿ ಪತ್ತೆಯಾಗಿದೆ. ಕೂಡಲೆ ಈ ಬಗ್ಗೆ ಬೆಳ್ತಂಗಡಿ ಪೋಲೀಸರಿಗೆ ಮಾಹಿತಿ ನೀಡಲಾಗಿದ್ದು ಪೋಲೀಸರು ಸ್ಥಳಕ್ಕೆ ಆಗಮಿಸಿ ಅಲ್ಲಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಮಾಹಿತಿ ತಿಳಿದು ರಾತ್ರಿಯ ವೇಳೆ ಘಟನಾ ಸ್ಥಳದಲ್ಲಿ ಜನ ಜಮಾಯಿಸಿದ್ದರೂ ಯಾವುದೇಅಹಿತಕರ ಘಟನೆಗಳು ನಡೆಯದಂತೆ ಪೋಲೀಸರು ಎಚ್ಚರ ವಹಿದ್ದಾರೆ. ಬೆಳ್ತಂಗಡಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬಂದು ಹೋದ ಪಿಕಪ್ ವಾಹನದ ಬಗ್ಗೆ ಪೋಲೀಸರಿಗೆ ಮಹಿತಿದೊರೆತಿದ್ದು ಈ ನಿಟ್ಟಿನಲ್ಲಿ ತನಿಖೆ ಮುಂದುವರೆಯುತ್ತಿದೆ.
ಮಲವಂತಿಗೆ, ಮಿತ್ತಬಾಗಿಲು, ಕೊಲ್ಲಿ, ಕಾಜೂರು, ಕುಕ್ಕಾವು ಈ ಪ್ರದೇಶಗಳು ಕಳೆದ ಅನೇಕ ವರ್ಷಗಳಿಂದ ದನಗಳ್ಳತನಕ್ಕೆ ಕುಖ್ಯಾತವಾಗಿದೆ. ಮೇಯಲು ಬಿಟ್ಟ ದನಗಳನ್ನು ಬಿಡಿ, ಹಟ್ಟಿಯಲ್ಲಿ ಕಟ್ಟಿಹಾಕಿದ ದನಗಳನ್ನು ಗೋಗಳ್ಳರು ಕದ್ದೊಯ್ದದ್ದೂ ನಡೆದಿದೆ. ಈ ಬಗ್ಗೆ ಪೋಲಿಸರಿಗೆ ನಾಲ್ಕೈದು ಬಾರಿ ದೂರು ನೀಡಿದ್ದರೂ. ಅವರು ತಮಗೆನೂ ಸಂಬಂಧವಿಲ್ಲದಂತೆ ವರ್ತಿಸಿದ್ದೇ ಹೆಚ್ಚು. ಗೋಗಳ್ಳತನದ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಿದರೆ ಅಥವಾ ಹಿಡಿದುಕೊಟ್ಟರೆ ಮಾಹಿತಿ, ಹಿಡಿದವರ ಮೇಲೇಯೇ ಕೇಸ್ ಜಡಿಯುತ್ತಾರೆ. ಇದರಿಂದಾಗಿ ಗೋಗಳ್ಳರಿಗೆ ಇನ್ನಷ್ಟು ಕುಮ್ಮಕ್ಕು ನೀಡುತ್ತಿದ್ದಾರೆ. ನಿಜವಾಗಿ ಪೋಲಿಸರಿಗೆ ದನಕದಿಯುವವರು ಯಾರೆಂದು ಸ್ಪಷ್ಟವಾಗಿ ಗೊತ್ತಿರುತ್ತದೆ, ಮಾಹಿತಿಯಿರುತ್ತದೆ. ಆದರೆಇಲ್ಲಿ ಕಾನೂನು ಎಂಬದು ಒಂದು ವರ್ಗದವರಿಗೆ ಮಾತ್ರ ಸೀಮಿತವಾಗಿ ಮಾಡಿದ್ದಾರೆ ಪೋಲಿಸರು.
ಇಂತಹ ಕೃತ್ಯಕದ ಬಗ್ಗೆ ಹಿಂದೂ ಸಂಘಟನೆಯವರು ನಿಗಾ ವಹಿಸಿ ಕಾರ್ಯಪ್ರರ್ವತ್ತರಾದರೆ ಅವರನ್ನು ನೈತಿಕ ಪೋಲಿಸ್ ಗಿರಿ ಎಂದು ಕರೆಯಲಾಗುತ್ತದೆ. ಇದೀಗ ಪೋಲಿಸರು ಅಂತಹ ಶಬ್ದ ಬಳಸಬಾರದು ಎಂದು ವಿನಂತಿಸಿದ್ದಾರೆ. ಅದರ ಬದಲು ಅನೈತಿಕ ಗೂಂಡಾಗಿರಿ ಎಂಬುದಾಗಿ ಉಪಯೋಗಿಸಬೇಕು ಎಂದು ಹೇಳಿದ್ದಾರೆ. ಆದರೆ ಪೋಲಿಸರು ಗೋಗಳ್ಳತನದ ವಿಚಾರದಲ್ಲಿ ಕಾನೂನು ರಿತ್ಯಾಕ್ರಮ ಕೈಗೊಳ್ಳದೆ ಸುಮ್ಮನಿದ್ದರೆ ಗೋವಿನ ವಿಚಾರದಲ್ಲಿ ನೈತಿಕ ಪೋಲಿಸ್ ಗಿರಿ ಮಾಡುವ ಅನಿವಾರ್ಯತೆ ಹಿಂದೂ ಸಂಘಟನೆಗಳು ಹೊಂದಬೇಕಾಗುತ್ತದೆ. ಕುಕ್ಕಾವು ಪ್ರದೇಶದಲ್ಲಿ ಹೀಗಾಗುತ್ತದೆ ಎಂದು ಸಂಘಟನೆಗಳು ಮುಂಚಿತವಾಗಿಯೇ ಎಚ್ಚರಿಸಿದ್ದರು ಎಂದೂ ಹೇಳಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.