ಕಾರವಾರ : ನೌಕಾಪಡೆ ಅಧಿಕಾರಿ ಲೆಫ್ಟಿನೆಂಟ್ ಕಮಾಂಡರ್ ಡಿ. ಎಸ್. ಚೌಹಾಣ್ ಅವರು ಶುಕ್ರವಾರ ಐಎನ್ಎಸ್ ವಿಕ್ರಮಾದಿತ್ಯ ಮತ್ತು ಅದರಲ್ಲಿದ್ದ ಸಹ ಸೈನಿಕರನ್ನು ಕಾಪಾಡುವ ಸಲುವಾಗಿ ಶುಕ್ರವಾರ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಭಾರತೀಯ ನೌಕೆಯು ಟ್ವಿಟರ್ ಮೂಲಕ ಚೌಹಾಣ್ ಅವರಿಗೆ ಶ್ರದ್ಧಾಂಜಲಿ ಅನ್ನು ಸಮರ್ಪಣೆ ಮಾಡಿದೆ.
ಶುಕ್ರವಾರ ಐಎನ್ಎಸ್ ವಿಕ್ರಮಾದಿತ್ಯದ ಒಂದು ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು, ಈ ವೇಳೆ ಅತ್ಯಂತ ಧೈರ್ಯದಿಂದ ಬೆಂಕಿಯೊಂದಿಗೆ ಹೋರಾಟ ನಡೆಸಿದ ಡಿ. ಎಸ್. ಚೌಹಾಣ್ ಅವರು ಬೆಂಕಿ ನಂದಿಸಿ ವಿಕ್ರಮಾದಿತ್ಯ ಮತ್ತು ಅದರಲ್ಲಿನ ಸೈನಿಕರು ಸುಟ್ಟು ಕರಕಲಾಗುವುದನ್ನು ತಪ್ಪಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ತಮ್ಮ ಪ್ರಾಣವನ್ನೇ ಅವರು ತ್ಯಾಗ ಮಾಡಿದ್ದಾರೆ.
ನೌಕಾ ಮುಖ್ಯಸ್ಥ ಅಡ್ಮಿರಲ್ ಸುನೀಲ್ ಲಾಂಬಾ ಪರವಾಗಿ ಟ್ವೀಟ್ ಮಾಡಿರುವ ನೌಕಾಸೇನೆಯು, ” ಅತ್ಯಂತ ನೋವು ಮತ್ತು ಸಂತಾಪದೊಂದಿಗೆ ನಾವು ಆನ್ ಬೋರ್ಡ್ ಐಎನ್ಎಸ್ ವಿಕ್ರಮಾದಿತ್ಯದ ಯುವ ಸಹೋದ್ಯೋಗಿ ಮತ್ತು ಧೈರ್ಯಶಾಲಿ ಸಹೋದರ ಡಿ.ಎಸ್. ಚೌಹಾಣ್ ಅವರ ಅಗಲಿಕೆಯ ಬಗ್ಗೆ ತಿಳಿಸುತ್ತಿದ್ದೇವೆ” ಎಂದಿದೆ.
“ಚೌಹಾಣ್ ಅವರ ಧೈರ್ಯ, ಸಾಹಸ ಬೆಂಕಿಯು ವಿಸ್ತರಿಸುವುದನ್ನು ತಡೆಯಿತು ಮತ್ತು ಯುದ್ಧನೌಕೆಯ ಯುದ್ಧ ಸಾಮರ್ಥ್ಯಕ್ಕೆ ದೊಡ್ಡ ಮಟ್ಟದಲ್ಲಿ ಹಾನಿ ಸಂಭವಿಸುವುದನ್ನು ತಪ್ಪಿಸಿತು” ಎಂಬುದಾಗಿ ನೌಕೆ ಟ್ವಿಟರ್ನಲ್ಲಿ ಹೇಳಿದೆ.
It is with profound grief & regret that we report the sad & untimely demise of Lieutenant Commander DS Chauhan, a young colleague and a brave brother-in-arms, onboard INS Vikramaditya. He laid down his life fighting a fire in a machinery compartment 1/3 pic.twitter.com/E2NUPJtSFK
— SpokespersonNavy (@indiannavy) April 26, 2019
His daring effort prevented the fire spreading & causing major damage to the combat capability of the Carrier 2/3 pic.twitter.com/a7F9EwYRkD
— SpokespersonNavy (@indiannavy) April 26, 2019
It is with profound grief & regret that we report the sad & untimely demise of Lieutenant Commander DS Chauhan, a young colleague and a brave brother-in-arms, onboard INS Vikramaditya. He laid down his life fighting a fire in a machinery compartment 1/3 pic.twitter.com/E2NUPJtSFK
— SpokespersonNavy (@indiannavy) April 26, 2019
30 ವರ್ಷದ ಡಿ. ಎಸ್. ಚೌಹಾಣ್ ಅವರು ಮಧ್ಯಪ್ರದೇಶದ ರತ್ಲಂ ಮೂಲದವರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಶನಿವಾರ ಅವರ ತವರಿಗೆ ತೆಗೆದುಕೊಂಡು ಬರಲಾಗುತ್ತಿದೆ. ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಇವರು ತಾಯಿ, ಪತ್ನಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.
ಚೌಹಾಣ್ ಅವರ ಕುಟುಂಬದೊಂದಿಗೆ ನಿಲ್ಲುವುದಾಗಿ ಭಾರತೀಯ ನೌಕೆ ಹೇಳಿದ್ದು, ಅವರ ಪ್ರಾಣ ತ್ಯಾಗವನ್ನು ವ್ಯರ್ಥವಾಗಲು ಬಿಡುವುದಿಲ್ಲ ಎಂದಿದೆ.
“ಅವರ ಧೈರ್ಯ ಮತ್ತು ಕರ್ತವ್ಯ ಪ್ರಜ್ಞೆಗೆ ನಮ್ಮ ಸೆಲ್ಯೂಟ್. ಅವರ ಅತ್ಯುನ್ನತ ತ್ಯಾಗ ವ್ಯರ್ಥವಾಗಲಾರದು. ಅವರ ಕುಟುಂಬದೊಂದಿಗೆ ಸದಾ ಇರುತ್ತೇವೆ” ಎಂದು ಟ್ವಿಟರ್ನಲ್ಲಿ ನೌಕೆ ಹೇಳಿಕೊಂಡಿದೆ.
ಭೀಕರ ಹೊಗೆಯ ಪರಿಣಾಮವಾಗಿ ಚೌಹಾಣ್ ಅವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು, ಅವರನ್ನು ಕಾರವಾರ ನೌಕಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಅವರು ಇಹಲೋಕ ತ್ಯಜಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.