ನವದೆಹಲಿ: ಭಾರತೀಯ ನೌಕಾಸೇನೆಯ ಮುಖ್ಯಸ್ಥ ಅಡ್ಮಿರಲ್ ಸುನೀಲ್ ಲಾಂಬಾ ಅವರು ಗುರುವಾರದಿಂದ ಎರಡು ದಿನಗಳ ಥಾಯ್ಲೆಂಡ್ ಭೇಟಿಯನ್ನು ಆರಂಭಿಸಲಿದ್ದಾರೆ. ಉಭಯ ದೇಶಗಳ ನಡುವಣ ಕಡಲ ದ್ವಿಪಕ್ಷೀಯ ಸಂಬಂಧವನ್ನು ಏಕೀಕೃತಗೊಳಿಸುವುದು ಮತ್ತು ವೃದ್ಧಿಸುವುದು ಅವರ ಈ ಭೇಟಿಯ ಉದ್ದೇಶವಾಗಿದೆ. ರಕ್ಷಣಾ ಸಹಕಾರದ ಹೊಸ ಮಾರ್ಗಗಳನ್ನು ಕೂಡ ಈ ಭೇಟಿಯ ಗುರಿಯಾಗಿದೆ.
“ಭಾರತ ಮತ್ತು ಥೈಲ್ಯಾಂಡ್ ನಡುವಿನ ಕಡಲ ದ್ವಿಪಕ್ಷೀಯ ಸಂಬಂಧಗಳನ್ನು ಏಕೀಕರಿಸುವ ಮತ್ತು ವೃದ್ಧಿಸುವ ಉದ್ದೇಶದಿಂದ ಮತ್ತು ರಕ್ಷಣಾ ಸಹಕಾರದ ಹೊಸ ಮಾರ್ಗಗಳನ್ನು ಅನ್ವೇಷಿಸುವ ಗುರಿಯೊಂದಿಗೆ ಈ ಭೇಟಿಯನ್ನು ನೀಡಲಾಗುತ್ತಿದೆ’ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಈ ಭೇಟಿಯ ಸಮಯದಲ್ಲಿ ಅಡ್ಮಿರಲ್ ಲಾಂಬಾ ಅವರು, ರಾಯಲ್ ಥಾಯ್ ಶಸ್ತ್ರಾಸ್ತ್ರ ಪಡೆಗಳ ಮುಖ್ಯಸ್ಥ ಜನರಲ್ ಪೊನ್ಪಿಪಾತ್ ಬೆಯಾಸ್ರಿ ಮತ್ತು ರಾಯಲ್ ಥಾಯ್ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಲುಚೈ ರುದಿತ್ ಸೇರಿದಂತೆ ಇತರ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಲಿದ್ದಾರೆ.
ಪ್ರಮುಖ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸುವುದರ ಜೊತೆಜೊತೆಗೆ, ರಾಯಲ್ ಥಾಯ್ ನೇವಿ ಮತ್ತು ಬ್ಯಾಂಕಾಕ್ನಲ್ಲಿರುವ ರಾಯಲ್ ಥಾಯ್ ಆರ್ಮ್ಡ್ ಫೋರ್ಸ್ ಕೇಂದ್ರ ಕಛೇರಿ ಮತ್ತು ಫುಕೆಟ್ನಲ್ಲಿರುವ 3 ನೆಯ ನೌಕಾದಳದ ಕಮಾಂಡ್ಗೆ ಲಾಂಬಾ ಭೇಟಿ ಕೊಡಲಿದ್ದಾರೆ.
ಹಲವಾರು ವಲಯಗಳಲ್ಲಿ ಭಾರತೀಯ ನೌಕೆಯು ರಾಯಲ್ ಥಾಯ್ ನೌಕೆಗೆ ಸಹಕಾರ ನೀಡುತ್ತದೆ. ಕಾರ್ಯಾಚರಣ ಸಂವಾದಗಳು, ತರಬೇತಿ ವಿನಿಮಯ ಮತ್ತು ಹೈಡ್ರೋಗ್ರಾಫಿಕ್ ಕೋ-ಆಪರೇಶನ್ ಮುಂತಾದ ವಲಯಗಳಲ್ಲಿ ಭಾರತ ಮತ್ತು ಥಾಯ್ಲೆಂಡ್ ನೌಕಾಪಡೆಗಳು ಪರಸ್ಪರ ಸಹಕಾರ ನೀಡುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.