ಇಟಾನಗರ್: ಎರಡು ದಿನಗಳ ಈಶಾನ್ಯ ರಾಜ್ಯಗಳ ಪ್ರವಾಸವನ್ನು ಹಮ್ಮಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಇಂದು ಅರುಣಾಚಲ ಪ್ರದೇಶದಲ್ಲಿ ’ಅರುಣಪ್ರಭಾ’ ಡಿಡಿ ಚಾನೆಲ್ನ್ನು ಲೋಕಾರ್ಪಣೆಗೊಳಿಸಿದರು. ಇದು ಅರುಣಾಚಲ ಪ್ರದೇಶಕ್ಕೆ ಅರ್ಪಿತಗೊಂಡ ಮೊದಲ ಚಾನೆಲ್ ಆಗಿದೆ. ಅಲ್ಲದೇ ಇಟಾನಗರದಲ್ಲಿ ವಿಮಾನನಿಲ್ದಾಣ ಲೋಕಾರ್ಪಣೆಗೊಳಿಸಿದರು. ಸೇಲಾ ಸುರಂಗ, ನ್ಯಾಷನಲ್ ಫಿಲ್ಮ್ ಆಂಡ್ ಟೆಲಿವಿಶನ್ ಇನ್ಸ್ಟ್ಯೂಟ್ಗೆ ಶಂಕುಸ್ಥಾಪನೆ ಮಾಡಿದರು. ಸುಮಾರು 4000 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಅಲ್ಲದೇ, ಅರುಣಾಚಲದ ಇಟಾನಗರದಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಅರುಣಾಚಲ ಪ್ರದೇಶವು ಸಂಪೂರ್ಣ (100%) ವಿದ್ಯುದೀಕರಣಗೊಂಡಿದ್ದಕ್ಕಾಗಿ ನಾನು ಅಭಿನಂದಿಸುತ್ತೇನೆ. 110MV ಯ 12 ಜಲವಿದ್ಯುತ್ ಯೋಜನೆಗಳು ಉದ್ಘಾಟಿಸಲಾಗಿದ್ದು ಇದು ಅರುಣಾಚಲಕ್ಕೆ ಮಾತ್ರವಲ್ಲದೆ ಈಶಾನ್ಯ ರಾಜ್ಯಗಳೂ ಸಹ ಸಹಾಯ ಮಾಡುತ್ತವೆ ಎಂದರು.
ಬಳಿಕ ಅಸ್ಸಾಂಗೆ ತೆರಳಿ ಅಲ್ಲಿನ ಅಮಿನ್ಗಾಂವ್ನಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಿದರು, ಇದು ಡಿಸೆಂಬರ್ 25ರ ಬಳಿಕದ ಮೂರನೇ ಅಸ್ಸಾಂ ಭೇಟಿ ಇದಾಗಿದೆ.
ಅಸ್ಸಾಂನಲ್ಲಿ ಮಾತನಾಡಿದ ಅವರು, ಯಾರಿಗೂ ಹಾನಿಯುಂಟು ಮಾಡದೆ ನಾವು ಬಡವರಿಗೆ ಶೇ.10ರಷ್ಟು ಮೀಸಲಾತಿಯನ್ನು ಕಲ್ಪಿಸಿದ್ದೇವೆ. ಅದೇ ರೀತಿ ಅಸ್ಸಾಂ ಬುಡಕಟ್ಟು ಜನರ ಹಕ್ಕುಗಳನ್ನೂ ರಕ್ಷಿಸುತ್ತೇವೆ ಎಂದಿದ್ದಾರೆ.
ಎನ್ಆರ್ಸಿ ಪಟ್ಟಿಯಿಂದ ಯಾವೊಬ್ಬ ಭಾರತೀಯ ಪ್ರಜೆಯೂ ಹೊರಗುಳಿಯದಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆಯನ್ನು ನಿಮಗೆ ನೀಡುತ್ತೇವೆ. ನಾಗರಿಕತ್ವ ವಿಷಯ ಕೇವಲ ಅಸ್ಸಾಂ ಅಥವಾ ಈಶಾನ್ಯ ಭಾಗಕ್ಕೆ ಸೀಮಿತವಾದುದಲ್ಲ, ಅದು ಇಡೀ ದೇಶಕ್ಕೆ ಸಂಬಂಧಿಸಿದ್ದು ಎಂದಿದ್ದಾರೆ.
ಪ್ರತಿಪಕ್ಷಗಳು ಎನ್ಆರ್ಸಿ ಬಗ್ಗೆ ಸುಳ್ಳು ಹರಡುತ್ತಿವೆ, ಬಾಂಗ್ಲಾ ನುಸುಳುಕೋರರಿಂದ ದೇಶವನ್ನು ರಕ್ಷಿಸಲು ಅದನ್ನು ತರಲಾಗಿದೆ. ಕೇಂದ್ರ ಸರ್ಕಾರ ನಾಗರಿಕತ್ವ ಮಸೂದೆಗೆ ಬದ್ಧವಾಗಿದ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.