ವಾರಣಾಸಿ: ಏಷ್ಯಾದ ಅತೀದೊಡ್ಡ ಸಿಸಾಮು ಚರಂಡಿಯಿಂದ ನಿತ್ಯ ಗಂಗಾ ನದಿಗೆ ಹರಿದು ಬರುತ್ತಿದ್ದ ಕೊಳಚೆ ಈಗ ಸಂಪೂಣ೯ ಸ್ಥಗಿತಗೊಂಡಿದೆ. ಈ ಮೂಲಕ ಗಂಗೆಗೆ ಅಂಟಿದ್ದ 128 ವರ್ಷಗಳ ಶಾಪ ವಿಮೋಚನೆಗೊಂಡಿದೆ.
ಸಿಸಾಮು ಚರಂಡಿಯಿಂದ ಕಳೆದ 128 ವರ್ಷಗಳಿಂದ ದಿನ ನಿತ್ಯ 14 ಕೋಟಿ ಲೀಟರ್ ಕೊಳಚೆ ಗಂಗಾ ನದಿಗೆ ಹರಿದು ಬರುತ್ತಿತ್ತು. ಇದೀಗ ಆ ಕೊಳಚೆಯನ್ನು ಜಜ್ಮಾವ್ ಟ್ರೀಟ್ ಮೆಂಟ್ ಪ್ಲಾಂಟ್ಗೆ ತಿರುಗಿಸಲಾಗಿದೆ.
ಈ ಹಿಂದೆಯೇ 8 ಕೋಟಿ ಲೀಟರ್ ಕೊಳಚೆಯನ್ನು ಯಶಸ್ವಿಯಾಗಿ ಗಂಗೆಗೆ ಹರಿಯದಂತೆ ತಿರುಗಿಸಲಾಗಿತ್ತು. ಆದರೆ ಉಳಿದ 6 ಕೋಟಿ ಲೀಟರ್ನ್ನು ತಿರುಗಿಸುವುದು ಕಷ್ಟದಾಯಕವಾಗಿತ್ತು. ಆದರೀಗ ಉತ್ತರಪ್ರದೇಶದ ಜಲ್ ನಿಗಮ್ ಮತ್ತು ನಮಾಮಿ ಗಂಗೆ ಎಂಜಿನಿಯರ್ಗಳು ಇದನ್ನು ಸಾಧಿಸಿ ತೋರಿಸಿದ್ದಾರೆ.
ಎಂಜಿನಿಯರಿಂಗ್ ತಂತ್ರಜ್ಞಾನ ಮತ್ತು ಪಂಪಿಂಗ್ ಮೆಶಿನ್ಗಳ ಸಹಾಯದಿಂದ ಕೊಳಚೆಯನ್ನು ಪ್ಲಾಂಟ್ಗೆ ತಿರುಗಿಸಲಾಗಿದೆ. ಈ ಮೂಲಕ ಗಂಗೆ 128 ವರ್ಷಗಳ ಶಾಪದಿಂದ ವಿಮೋಚನೆಗೊಂಡಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.