ಪುಣೆ: ತಂಬಾಕು, ಎಲೆ ಅಡಿಕೆ ಇತ್ಯಾದಿಗಳನ್ನು ತಿಂದು ಕಂಡ ಕಂಡ ಕಡೆ ಉಗುಳುವ ದುರಾಭ್ಯಾಸ ಇರುವವರಿಗೆ ಪುಣೆ ಮಹಾನಗರ ಪಾಲಿಕೆ ಸರಿಯಾದ ಛಾಟಿ ಬೀಸಿದೆ. ಉಗುಳುವ ರೋಗವುಳ್ಳವರಿಗೆ ಕೇವಲ ದಂಡ ಮಾತ್ರವಲ್ಲ, ಉಗುಳಿದ ಜಾಗವನ್ನು ಸ್ವಚ್ಛ ಮಾಡುವ ಶಿಕ್ಷೆಯನ್ನೂ ಜಾರಿಗೊಳಿಸಿದೆ.
ಬಸ್, ಕಾರ್, ಬೈಕ್ನಲ್ಲಿ ಪ್ರಯಾಣಿಸುವಾಗ ಅಥವಾ ನಡೆದುಕೊಂಡು ಹೋಗುತ್ತಿರಬೇಕಾದರೂ ಉಗುಳಿ ಗಲೀಜು ಮಾಡುವವರಿಗೆ ತಕ್ಕ ಪಾಠವನ್ನು ಕಲಿಸುವ ನಿಟ್ಟಿನಲ್ಲಿ ಪುಣೆ ಪಾಲಿಕೆ ಈ ಕಠಿಣ ನಿಯಮವನ್ನು ಜಾರಿಗೆ ತಂದಿದೆ.
ಗಲೀಜು ಮಾಡುವವರಿಂದ ಒಂದಿಷ್ಟು ಹಣವನ್ನು ದಂಡವಾಗಿ ಪಡೆದುಕೊಂಡರೆ ಬದಲಾವಣೆ ಕಾಣಲು ಸಾಧ್ಯವಿಲ್ಲ ಎಂಬುದನ್ನು ಅರಿತು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಅತ್ಯಂತ ಅವಮಾನಕರವಾದ ಶಿಕ್ಷೆಯಾದ ಕಾರಣ ಜನರು ಉಗುಳುವುದಕ್ಕೂ ಮುನ್ನ ಖಂಡಿತವಾಗಿಯೂ ಒಂದು ಬಾರಿ ಯೋಚಿಸುತ್ತಾರೆ.
8 ದಿನಗಳ ಹಿಂದೆ ಈ ನಿಯಮ ಜಾರಿಯಾಗಿದ್ದು, ಈಗಾಗಲೇ 156 ಮಂದಿ ತಾವು ಉಗುಳಿದ ಜಾಗವನ್ನು ಸ್ವಚ್ಛ ಮಾಡಿದ್ದಾರೆ. ಅಲ್ಲದೇ ಅವರಿಂದ 150 ರೂಪಾಯಿ ದಂಡವನ್ನೂ ಪಡೆಯಲಾಗಿದೆ.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.