ನವದೆಹಲಿ: ಸಂಸತ್ತನ್ನು ಉದ್ದೇಶಿಸಿ ಇಂದು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಸ್ವಾರ್ಥಕ್ಕಾಗಿ ದೇಶವನ್ನು ವಿಭಜನೆಗೊಳಿಸಿದ್ದೀರಿ, ಕಾಂಗ್ರೆಸ್ ಮಾಡಿದ ಪಾಪದ ಬೆಲೆಯನ್ನು ಈಗಲೂ ದೇಶ ತೀರಿಸುತ್ತಿದೆ ಎಂದು ವಾಗ್ ಪ್ರಹಾರ ನಡೆಸಿದರು.
‘ಪ್ರಜಾಪ್ರಭುತ್ವದ ಬಗ್ಗೆ ನಮಗೆ ಉಪದೇಶ ನೀಡಬೇಡಿ, ಪ್ರಧಾನಿಯ ಸುಗ್ರಿವಾಜ್ಞೆಯನ್ನು ಮಾಧ್ಯಮಗಳ ಮುಖಕ್ಕೆ ಹರಿದು ಬಿಸಾಕಿದವರು ನಿಮ್ಮ ಮುಖ್ಯಸ್ಥರು, ಯುವ ನಾಯಕರ ಅಭಿಪ್ರಾಯ ಕೇಳದಂತೆ ಮಾಡಿದವರು ನಿಮ್ಮ ಮುಖ್ಯಸ್ಥರು’ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ವಿರುದ್ಧ ಟಿಕಾಪ್ರಹಾರ ನಡೆಸಿದರು.
ಭಾಷಣಕ್ಕೆ ಅಡ್ಡಿ ಪಡಿಸುತ್ತಿದ್ದ ಕಾಂಗ್ರೆಸ್ಸಿಗರನ್ನು ಗುರಿಯಾಗಿಟ್ಟು ಮಾತನಾಡಿದ ಮೋದಿ, ’ನಿಮ್ಮ ಘೋಷಣೆಗೆ ನನ್ನ ಧ್ವನಿಯನ್ನು ಅಡಿಗಿಸಲಾಗದು’ ಎಂದರು.
ಅಟಲ್ ಜೀ ಅವರು ಉತ್ತರಾಖಂಡ, ಛತ್ತೀಸ್ಗಢ, ಜಾರ್ಖಾಂಡನ್ನು ವಿಭಜನೆ ಮಾಡಿದ ಮಾದರಿಯನ್ನು ಮುಂದಿಟ್ಟ ಅವರು, ಆಂಧ್ರ ವಿಭಜನೆಯ ವೇಳೆ ಕಾಂಗ್ರೆಸ್ ಮಾಡಿದ ಅನಾಹುತಗಳನ್ನು ವಿವರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.