ಬೆಂಗಳೂರು: ಕೈಗಾರೀಕರಣದ ಪರಿಣಾಮವಾಗಿ ನಿರ್ಜೀವವಾಗಿದ್ದ ಬೆಂಗಳೂರಿನ ಕ್ಯಲಸನಹಳ್ಳಿ ಕೆರೆಯನ್ನು ಸಂಸೇರಾ ಎಂಜಿನಿಯರಿಂಗ್ ಎಂಬ ಸಂಸ್ಥೆ ಪುನರುಜ್ಜೀವನಗೊಳಿಸಿದ್ದು ಮಾತ್ರವಲ್ಲ ಇದೀಗ ಕೆರೆಯ ಸುತ್ತಮುತ್ತ ಸುಮಾರು 6 ಸಾವಿರ ಗಿಡಗಳನ್ನು 4 ಗಂಟೆಯೊಳಗೆ ನೆಡಲು ಸಜ್ಜಾಗಿದೆ.
ಸಂಸೇರಾ ಕಾರ್ಪೋರೇಟ್ ಪ್ರಾಜೆಕ್ಟ್ ಮುಖ್ಯಸ್ಥ ಮತ್ತು ಕೆರೆಯ ಪುನರುಜ್ಜೀವನದ ರುವಾರಿ ಆನಂದ್ ಮಲ್ಲಿಗವಾಡ್ ಅವರು ರೈತರು ಮತ್ತು ಸ್ಥಳಿಯ ಜನರ ನೆರವಿನೊಂದಿಗೆ 45 ದಿನದಲ್ಲಿ ಸುಮಾರು 35 ಎಕರೆ ಪ್ರದೇಶದಲ್ಲಿದ್ದ ಕೆರೆ ಪುನರುಜ್ಜೀವನಗೊಳಿಸಿದ್ದಾರೆ.
ಕೆರೆಯ ಸುತ್ತಲೂ 40 ಬೆಂಚುಗಳನ್ನು ನಿರ್ಮಿಸಲಾಗಿದೆ. ಕಸದ ಬುಟ್ಟಿಗಳನ್ನು ಅಳವಡಿಸಲಾಗಿದೆ. ಅಷ್ಟೇ ಅಲ್ಲದೇ ಮಕ್ಕಳ ಆಟದ ಪ್ರದೇಶವನ್ನು ನಿರ್ಮಾಣ ಮಾಡಲಾಗುತ್ತದೆ. ಒಟ್ಟಿನಲ್ಲಿ ಕೆರೆಯ ಸೌಂದರ್ಯವನ್ನು ಪರಿಸರ ಪ್ರೇಮಿಗಳು ಆಸ್ವಾದಿಸಲು ಅವಕಾಶ ಮಾಡಿಕೊಡಲಾಗಿದೆ.
ಕಾರ್ಯ ಬಹುತೇಕ ಅಂತ್ಯಗೊಂಡಿದ್ದು, ಇದೀಗ ಎನ್ಜಿಓ ಸೇ ಟ್ರೀ ಸಹಯೋಗದೊಂದಿಗೆ 4 ಗಂಟೆಯ ಬೃಹತ್ ಗಿಡ ನೆಡುವ ಅಭಿಯಾನವನ್ನು ಆಯೋಜನೆಗೊಳಿಸಲಾಗಿದೆ.
ಸಮೀಕ್ಷೆ ನಡೆಸಿದ ಇವರಿಗೆ 4 ಎಕರೆ ಭೂಮಿಯನ್ನು ಕೃಷಿಗಾಗಿ ಒತ್ತುವರಿ ಮಾಡಿಕೊಂಡಿದ್ದು ಕಂಡು ಬಂದಿದೆ. ಇದೀಗ ಆ ಭೂಮಿಯ 1 ಎಕರೆಯಲ್ಲಿ ಆರ್ಯುವೇದಿಕ್ ಗಿಡಗಳನ್ನು ಮತ್ತು ಉಳಿದ 3 ಎಕರೆ ಪ್ರದೇಶದಲ್ಲಿ ಮಿಯಾವಕಿ ಮಾದರಿಯಲ್ಲಿ ಅರಣ್ಯವನ್ನು ಬೆಳೆಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
ಶನಿವಾರ 1,500 ಪರಿಸರ ಪ್ರೇಮಿಗಳು, ಹತ್ತಿರದ ಗ್ರಾಮಗಳ 200 ಜನರು, ಸಂಸೇರಾದ 300 ಸಿಬ್ಬಂದಿಗಳು ಗಿಡ ನೆಡುವ ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.