ಬೆಂಗಳೂರು: ಹಿಂದಿಯನ್ನು ಬಲವಂತವಾಗಿ ಹೇರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಿರುವ ಕನ್ನಡ ಪರ ಸಂಘಟನೆಗಳು ಬೆಂಗಳುರಿನ ಮೆಟ್ರೋ ಬೋರ್ಡ್ಗಳಲ್ಲಿನ ಹಿಂದಿ ವಾಕ್ಯಗಳಿಗೆ ಮಸಿ ಬಳಿಯುವ ಕೆಲಸವನ್ನು ಮಾಡುತ್ತಿವೆ.
ಹಲವಾರು ಸ್ಟೇಶನ್ಗಳಲ್ಲಿ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಹಿಂದಿ ಸೈನ್ಗಳ ಮೇಲೆ ಮಸಿ ಎರಚಿದ್ದಾರೆ. ನಾವು ಮೆಟ್ರೋ ಕಾರ್ಪೋರೇಶನ್ಗೆ ನೀಡಿದ ಗಡುವು ಮುಗಿದ ಹಿನ್ನಲೆಯಲ್ಲಿ ಹಿಂದಿ ಅಕ್ಷರಗಳನ್ನು ಅಳಿಸುವ ಕಾರ್ಯವನ್ನು ನಾವೇ ಮಾಡುತ್ತಿದ್ದೇವೆ ಎಂದು ಇವರು ಹೇಳಿಕೊಂಡಿದ್ದಾರೆ.
ಬೆಂಗಳೂರು ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ, ಇನ್ನು ಕೆಲವರು ತಮ್ಮ ಕಾರ್ಯವನ್ನು ಎಗ್ಗಿಲ್ಲದೆ ಮಾಡಿದ್ದಾರೆ.
ಕಾರ್ಯಕರ್ತರ ಈ ಕ್ರಮದಿಂದಾಗಿ ಸುಂದರವಾಗಿದ್ದ ಸೈನ್ ಬೋರ್ಡುಗಳು ಇದೀಗ ಕುರೂಪಗೊಂಡಿವೆ. ಅಚ್ಚರಿಯೆಂದರೆ ಇಂಗ್ಲೀಷ್ ಅಕ್ಷರಗಳಿಗೆ ತುಸುವೂ ಹಾನಿ ಮಾಡದಂತೆ ಮಸಿ ಎರಚಿದ್ದಾರೆ.
ಕನ್ನಡಕ್ಕೆ ಧಕ್ಕೆ ತಂದಿರುವ ಇಂಗ್ಲೀಷ್ ಮೇಲೆ ಇಲ್ಲದ ಕನ್ನಡ ಕಾರ್ಯಕರ್ತರ ಕೋಪ ಹಿಂದಿ ಮೇಲೆ ಯಾಕೆ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.