ಕೋಲ್ಕತ್ತಾ: ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ವಿಜ್ಞಾನಿಗಳು ಭಾರತದ ಸಮುದ್ರ ಆಳದಲ್ಲಿ ಅಪಾರ ಪ್ರಮಾಣದ ಅತ್ಯಮೂಲ್ಯವಾದ ಲೋಹ ಮತ್ತು ಖನಿಜಗಳು ಇರುವುದನ್ನು ಪತ್ತೆ ಹಚ್ಚಿದ್ದಾರೆ.
2014ರಲ್ಲೇ ಮಂಗಳೂರು, ಚೆನ್ನೈ, ಮನ್ನಾರ್ ಬಸಿನ್, ಅಂಡಮಾನ್, ನಿಕೋಬಾರ್ ಐಸ್ಲ್ಯಾಂಡ್ ಮತ್ತು ಲಕ್ಷದ್ವೀಪದ ಸುತ್ತಮುತ್ತ ಅಪಾರ ಪ್ರಮಾಣದ ಸಮುದ್ರ ಸಂಪನ್ಮೂಲಗಳು ಇರುವುದನ್ನು ಪತ್ತೆ ಮಾಡಲಾಯಿತು.
ಅಪಾರ ಸುಣ್ಣದ ಮಣ್ಣು, ಫಾಸ್ಪೆಟ್ ಭರಿತ ಮತ್ತು ಸುಣ್ಣಯುಕ್ತ ಸಂಚಯಗಳು, ಹೈಡ್ರೋಕಾರ್ಬನ್ಸ್, ಮೆಟಲೀಫೆರಸ್ ನಿಕ್ಷೇಪಗಳು ಮತ್ತು ಮೈಕ್ರೋನ್ಯಾಡ್ಯುಲ್ಸ್ಗಳು ಭೂವಿಜ್ಞಾನಿಗಳಲ್ಲಿ ಸಮುದ್ರ ಆಳದಲ್ಲಿ ಅಪಾರ ಪ್ರಮಾಣದ ಸಂಪತ್ತು ಇದೆ ಎಂಬ ಸೂಚನೆ ನೀಡಿದ್ದವು.
3 ವರ್ಷಗಳ ನಿರಂತರ ಪರಿಶೋಧನೆಯ ಬಳಿಕ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ 181,025 ಸರ್ ಕಿಲೋಮೀಟರ್ನ ಹೈ ರೆಸಲ್ಯೂಷನ್ ಸೀಬೆಡ್ ಮಾರ್ಫೋಲಾಜಿಕಲ್ ಡಾಟಾವನ್ನು ರಚಿಸಿದೆ. ಅಲ್ಲದೇ ಭಾರತದ ವಿಶೇಷ ಆರ್ಥಿಕ ವಲಯದಲ್ಲಿ 10 ಮಿಲಿಯನ್ ಟನ್ ಸುಣ್ಣದ ಮಣ್ಣಿನ ಸಂಭವಿಕೆಯನ್ನು ಸ್ಥಾಪಿಸಿದೆ.
ಸಮುದ್ರ ರತ್ನಾಕರ್, ಸಮುದ್ರ ಕೌಸ್ತುಭ್, ಸಮುದ್ರ ಸೌದಿಕಮ ಹಡಗುಗಳ ಮೂಲಕ ಹೈ ರೆಸಲ್ಯೂಷನ್ ಸೀಬೆಡ್ ಮ್ಯಾಪಿಂಗ್ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮಾಪನ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.