ನವದೆಹಲಿ : 70 ನೇ ಸ್ವಾತಂತ್ರ್ಯ ದಿನಾಚರಣೆಗೆ ಇನ್ನು 1 ತಿಂಗಳು ಇರುವಂತೆಯೇ ಕೇಂದ್ರ ಅದರ ಆಚರಣೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೆ ಎಲ್ಲರಿಗೂ ತಿರಂಗಾದೊಂದಿಗೆ ಸೆಲ್ಫಿ ಕ್ಲಿಕ್ಕಿಸುವಂತೆ ಕರೆ ನೀಡಿದೆ.
ತಿರಂಗಾದೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಅದನ್ನು ಟ್ವಿಟರ್ನಲ್ಲಿ ಹಾಕಿದರೆ ಭಾರತೀಯ ಸರ್ಕಾರದ ಅಧಿಕೃತ ಟ್ವಿಟರ್ ಅಕೌಂಟ್ ಅದನ್ನು ರೀ-ಟ್ವೀಟ್ ಮಾಡಿ ನಮ್ಮನ್ನು ಸ್ಟಾರ್ ಆಗಿಸಲಿದೆ.
ಈಗಾಗಲೇ ಪಿಐಬಿಯು ಎಲ್ಲಾ ಸಚಿವರುಗಳಿಗೆ ಪ್ರಸಾರ ಖಾತೆ ಸಚಿವ ಎಂ. ವೆಂಕಯ್ಯ ನಾಯ್ಡು ಅವರ ನಿರ್ದೇಶನದಂತೆ ಪತ್ರವನ್ನು ಬರೆದಿದ್ದು, ೭೦ನೇ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ವಿಶೇಷ ಲೇಖನಗಳನ್ನು ಬರೆಯುವಂತೆ ತಿಳಿಸಿದೆ.
ಈ ಲೇಖನದ ಥೀಮ್ ‘ಸ್ವಾತಂತ್ರ್ಯದ ಬಳಿಕ ದೇಶದ ಸರ್ವಾಂಗೀಣ ಅಭಿವೃದ್ಧಿ’ ಎಂಬುದಾಗಿದೆ.
ಅಷ್ಟೇ ಅಲ್ಲದೆ ಸರ್ಕಾರವು ಟ್ವಿಟರ್ನಲ್ಲಿ ಮತದಾನ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ರಸಪ್ರಶ್ನೆಗಳನ್ನು ಆಯೋಜಿಸಲಿದೆ.
ಭಾರತ ಮತ್ತು ಸ್ವಾತಂತ್ರ್ಯಕ್ಕಾಗಿನ ಹೋರಾಟಗಳ ನೈಜತೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಜನರಿಗೆ ದೇಶದ ಬಗ್ಗೆ ಹೆಮ್ಮೆ ಬರಲಿ ಮತ್ತು ನಕಾರಾತ್ಮಕ ಅಂಶಗಳು ಬಹಳಷ್ಟಿದ್ದರೂ ದೇಶವು ಸ್ವಾತಂತ್ರ್ಯದ ಬಳಿಕ ತನ್ನನ್ನು ತಾನು ವಿಕಸನಗೊಳಿಸಿದ ಬಗೆಯ ಬಗ್ಗೆ ಜನರು ಅರ್ಥಮಾಡಿಕೊಳ್ಳಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.