ಮುಂಬೈ : ಮಹಾರಾಷ್ಟ್ರದ ಮರಾಠಾವಾಡ ಮತ್ತು ವಿದರ್ಭಾದಲ್ಲಿನ ಸುಮಾರು 2000 ಗ್ರಾಮಗಳು ವಿಶ್ವ ಬ್ಯಾಂಕ್ ಪ್ರೋತ್ಸಾಹಿತ ರಾಷ್ಟ್ರೀಯ ಅಂತರ್ಜಲ ನಿರ್ವಹಣಾ ಮತ್ತು ಅಭಿವೃದ್ಧಿ ಯೋಜನೆಗೆ ಒಳಪಡಲಿದೆ.
ಸರ್ಕಾರವು ಈ ಯೋಜನೆಯ ಮೂಲಕ ಅಂತರ್ಜಲದ ಮಟ್ಟವನ್ನು ನಿಯಂತ್ರಿಸಲು ಮತ್ತು ವೃದ್ಧಿಸುವ ಉದ್ದೇಶವನ್ನು ಹೊಂದಿದೆ. ಮಹಾರಾಷ್ಟ್ರಕ್ಕೆ ಈ ನೀರನ್ನು ಲಭ್ಯಗೊಳಿಸಲು ಮುಂದಾಗಿದೆ.
ಈ ಯೋಜನೆ ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೆ ಉತ್ತರ ಪ್ರದೇಶದ ಬರಪೀಡಿತ ಬುಂದೇಲ್ಖಂಡ್ ಮತ್ತು ಕಲಹಂಡಿ, ಬೊಲಾಂಗೀರ್ ಮತ್ತು ಒರಿಸ್ಸಾದ ಕರಾಪುಟ್ನಲ್ಲೂ ಅನುಷ್ಠಾನಕ್ಕೆ ತರಲು ಉದ್ದೇಶಿಸಲಾಗಿದೆ.
ಈ ಯೋಜನೆಗೆ ಸುಮಾರು 6 ಸಾವಿರ ಕೋಟಿ ವೆಚ್ಚವಾಗಲಿದ್ದು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಮತ್ತು ವಿಶ್ವ ಬ್ಯಾಂಕ್ ಈ ವೆಚ್ಚವನ್ನು ಸಮಾನವಾಗಿ ಭರಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.