ನವದೆಹಲಿ : ಕೇಂದ್ರ ಸರ್ಕಾರ ಉಗ್ರರನ್ನು ಎದುರಿಸುವ ವಿಷಯದಲ್ಲಿ ಸೇನಾಪಡೆಗೆ ಸ್ವತಂತ್ರವನ್ನು ನೀಡಿದ ಹಿನ್ನಲೆಯಲ್ಲಿ ಹಿಂಸಾಚಾರ ಪೀಡಿತ ಜಮ್ಮು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳ ವಿರುದ್ಧ ಸೇನಾಪಡೆಗಳು ಹೆಚ್ಚು ಸಕ್ರಿಯವಾಗಿವೆ.
ಈ ವರ್ಷ ಜುಲೈ 2 ರವರೆಗೆ ಸುಮಾರು 92 ಉಗ್ರರನ್ನು ನಮ್ಮ ಯೋಧರು ಹತ್ಯೆ ಮಾಡಿದ್ದಾರೆ.
2016 ರಲ್ಲಿ 79 ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಈ ವರ್ಷ ಹತರಾದ ಉಗ್ರರ ಸಂಖ್ಯೆ 2012 ಮತ್ತು 2013 ರಲ್ಲಿ ಹತರಾದ ಉಗ್ರರ ಸಂಖ್ಯೆಗಿಂತ ಹೆಚ್ಚಿನದ್ದಾಗಿದೆ.
ಸೇನೆಯ ಈ ಕಾರ್ಯದಿಂದಲೇ ಕೇಂದ್ರ ಸರ್ಕಾರ ಭಯೋತ್ಪಾದನೆಯ ವಿರುದ್ಧ ಗಂಭೀರ ಧೋರಣೆಯನ್ನು ಅನುಸರಿಸುತ್ತಿದೆ ಮತ್ತು ಉಗ್ರ ಚಟುವಟಿಕೆಗಳನ್ನು ನಿಲ್ಲಿಸುವತ್ತ ಪ್ರಧಾನಿ ನರೇಂದ್ರ ಮೋದಿಯವರ ಗುರಿ ಸ್ಪಷ್ಟವಾಗಿದೆ ಎಂದು ತಿಳಿದುಬರುತ್ತದೆ.
ಉಗ್ರ ವಿರೋಧಿ ಕಾರ್ಯಾಚರಣೆಗಳನ್ನು ಸರ್ಕಾರ ಹೆಚ್ಚು ಕಠಿಣಗೊಳಿಸಿದ್ದು, ಇದರಿಂದ ಹಲವಾರು ಉಗ್ರ ನಾಯಕರು ನೆಲಕ್ಕುರುಳಲು ಕಾರಣವಾಗಿದೆ.
ಸರ್ಜಿಕಲ್ ಸ್ಟ್ರೈಕ್ನಂತಹ ಕಾರ್ಯದ ಮೂಲಕವೂ ಗಡಿಯಾಚೆಗಿನ ಉಗ್ರರ ಎದೆಯಲ್ಲಿ ನಮ್ಮ ಸೈನಿಕರು ನಡುಕ ಹುಟ್ಟಿಸಿದ್ದಾರೆ.
ಕಣಿವೆ ರಾಜ್ಯದ ಉಗ್ರರನ್ನು ಸದೆಬಡಿಯಲು ಸರ್ಕಾರವು ನಮ್ಮ ಸೈನಿಕರಿಗೆ ಸ್ವಾತಂತ್ರ್ಯ ನೀಡಿರುವುದೇ ಇಷ್ಟು ಪ್ರಮಾಣದ ಉಗ್ರರ ಹತ್ಯೆಗೆ ಕಾರಣವಾಗಿದೆ. ಅಲ್ಲದೆ ಒಳನುಸುಳುವಿಕೆಯ ಪ್ರಮಾಣವು ಕಡಿಮೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.