ಲಕ್ನೋ: ಜುಲೈ 11ರಿಂದ ಉತ್ತರಪ್ರದೇಶದಲ್ಲಿ ಅಧಿವೇಶನ ಆರಂಭವಾಗಲಿದ್ದು, ಇಲ್ಲಿ ಯೋಗಿ ಆದಿತ್ಯನಾಥ ಸರ್ಕಾರ ತನ್ನ ಚೊಚ್ಚಲ ವಾರ್ಷಿಕ ಬಜೆಟ್ ಮಂಡಿಸಲಿದೆ.
ಈ ಅಧಿವೇಶನದಲ್ಲಿ ಒಟ್ಟು 15 ಕಲಾಪಗಳು ನಡೆಯಲಿದ್ದು, ಜುಲೈ 28ಕ್ಕೆ ಅಂತ್ಯಗೊಳ್ಳಲಿದೆ.
ಕೊನೆಯ ಬಾರಿಗೆ ಮೇ 15ರಿಂದ 19ರವರೆಗೆ ಉತ್ತರಪ್ರದೇಶದಲ್ಲಿ ಅಧಿವೇಶನ ನಡೆದಿದ್ದು, ಈ ವೇಳೆ ಜಿಎಸ್ಟಿ ಮಸೂದೆಗೆ ಅನುಮೋದನೆ ನೀಡಲಾಗಿತ್ತು.
ರೈತರ ಸಾಲಮನ್ನಾವನ್ನು ಈಗಾಗಲೇ ಅಲ್ಲಿ ಘೋಷಿಸಲಾಗಿದ್ದು, ಇದಕ್ಕಾಗಿ ಈ ಬಜೆಟ್ನ್ನು 4,000 ಕೋಟಿಯನ್ನು ಇಲ್ಲಿ ಮೀಸಲಿಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.