ನವದೆಹಲಿ: ಬಹುನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ ನಿನ್ನೆ ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ. ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇದಕ್ಕೆ ಚಾಲನೆ ನೀಡಿ ಮಾತನಾಡಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಇದು ಭಾರತದ ಪ್ರಜಾಪ್ರಭುತ್ವದ ವಿವೇಕ ಮತ್ತು ಪ್ರೌಢಿಮೆಗೆ ಸಂದ ಗೌರವ ಎಂದು ಬಣ್ಣಿಸಿದರು.
ಜಿಎಸ್ಟಿ ಜಾರಿ ರಾಷ್ಟ್ರದ ಅಪೂರ್ವ ಕ್ಷಣ ಎಂದು ಬಣ್ಣಿಸಿದ ಅವರು, 2002ರ ಡಿಸೆಂಬರ್ನಲ್ಲಿ ಆರಂಭಗೊಂಡ 14 ವರ್ಷಗಳ ಸುಧೀರ್ಘ ಪ್ರಯಾಣದ ಮುಕ್ತಾಯವೇ ಈ ಐತಿಹಾಸಿಕ ಕ್ಷಣ ಎಂದರು.
‘ಕೇಂದ್ರ ಮತ್ತು ರಾಜ್ಯಗಳ ವಿಸ್ತೃತ ಒಮ್ಮತದ ಫಲವಾಗಿಯೇ ಹೊಸ ತೆರಿಗೆ ವ್ಯವಸ್ಥೆಯ ಯುಗ ಆರಂಭವಾಗಿದೆ. ರಫ್ತುಗಳನ್ನು ಇದು ಹೆಚ್ಚು ಸ್ಪರ್ಧಾತ್ಮಕಗೊಳಿಸಲಿದೆ ಮತ್ತು ಆಮದುಗಳೊಂದಿಗೆ ಸ್ಪರ್ಧೆ ನಡೆಸಲು ದೇಶೀ ಕೈಗಾರಿಕೆಗಳಿಗೆ ಇದು ವೇದಿಕೆ ನಿರ್ಮಿಸಲಿದೆ’ ಎಂದು ಅಭಿಪ್ರಾಯಿಸಿದ್ದಾರೆ.
’ಆಗಿನ ವಿತ್ತ ಸಚಿವನಾಗಿ ಜಿಎಸ್ಟಿಯ ರೂಪ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಿಕಟವಾಗಿ ಕಾರ್ಯ ಮಾಡಿದ್ದೇನೆ. ಸಾಂವಿಧಾನಿ ತಿದ್ದಪಡಿ ಕಾಯ್ದೆಗೆ ಅನುಮತಿ ನೀಡಿದ ಪ್ರತಿಷ್ಠೆಯನ್ನು ನಾನು ಹೊಂದಿದ್ದೇನೆ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.