ನವದೆಹಲಿ: ಮಧ್ಯರಾತ್ರಿ ಭಾರತದ ಸಂಸತ್ತಿನ ಐತಿಹಾಸಿಕ ಸೆಂಟ್ರಲ್ ಹಾಲ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ದೇಶದ ಅತೀದೊಡ್ಡ ತೆರಿಗೆ ಸುಧಾರಣೆ ಜಿಎಸ್ಟಿಗೆ ಚಾಲನೆ ನೀಡಿದರು. ರಾಜಕೀಯ, ಉದ್ಯಮ, ಕಾನೂನಿನ ಹಲವಾರು ಗಣ್ಯರು ಸೇರಿದಂತೆ ಸಾವಿರ ಮಂದಿ ಇದಕ್ಕೆ ಸಾಕ್ಷಿಯಾದರು.
14 ವರ್ಷಗಳ ರಾಜಕೀಯ ಹೋರಾಟದಲ್ಲಿ ಜಯಗಳಿಸಿದ ಜಿಎಸ್ಟಿಯ ಜಾರಿಯನ್ನು ಒಂದು ಹಬ್ಬದಂತೆ ಸಂಸತ್ತಿನಲ್ಲಿ ಸಂಭ್ರಮಿಸಲಾಯಿತು. ಮೋದಿ ಮತ್ತು ರಾಷ್ಟ್ರಪತಿ ಬಟನ್ ಪ್ರೆಸ್ ಮಾಡುವ ಮೂಲಕ ಒಂದು ದೇಶ ಒಂದು ತೆರಿಗೆಯನ್ನು ಅನುಷ್ಠಾನಕ್ಕೆ ತಂದರು. ಜಿಎಸ್ಟಿ ಬಗೆಗಿನ ಕಿರುಚಿತ್ರವನ್ನು ಈ ವೇಳೆ ಪ್ರಸಾರ ಮಾಡಲಾಯಿತು.
ಭಾರತ ತನ್ನನ್ನು ತಾನು ಸ್ವತಂತ್ರ ಎಂದು ಘೋಷಿಸಿಕೊಂಡ ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ನಿಂತು ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದರು. ‘ಲೇಹ್ನಿಂದ ಲಕ್ಷಾದೀಪದವರೆಗೆ ಭಾರತ ಏಕ ತೆರಿಗೆಯನ್ನು ಹೊಂದಲಿದೆ. ಇದು ನಿಜವಾಗಿ ಗುಡ್ ಆ್ಯಂಡ್ ಸಿಂಪಲ್ ಟ್ಯಾಕ್ಸ್’ ಎಂದು ಬಣ್ಣಿಸಿದರು.
ಈ ಹೊಸರ ತೆರಿಗೆ ವ್ಯವಹಾರಗಳನ್ನು ಸರಳಗೊಳಿಸುವುದು, ಭ್ರಷ್ಟಾಚಾರವನ್ನು ಕುಗ್ಗಿಸುವುದು ಮಾತ್ರವಲ್ಲದೇ, ತೆರಿಗೆ ನೆಟ್ವರ್ಕ್ನ್ನು ವಿಸ್ತರಿಸಲಿದೆ ಮತ್ತು ಬಡವರಿಗೆ ಸಹಾಯ ಮಾಡಲಿದೆ. ಸಮಾಜಿಕ ಸುಧಾರಣೆಗೆ ಪೂರಕವಾದ ಆರ್ಥಿಕ ಸುಧಾರಣೆಯನ್ನು ಇದು ತರಲಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.