ಶ್ರೀನಗರ: ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಭದ್ರತಾ ಪಡೆಗಳ ತಾಳ್ಮೆಯನ್ನು ಪರೀಕ್ಷಿಸದಂತೆ ತನ್ನ ರಾಜ್ಯದ ಮೂಲಭೂತವಾದಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಪೊಲೀಸ್ ಅಧಿಕಾರಿ ಮೊಹಮ್ಮದ್ ಆಯೂಬ್ ಪಂಡಿತ್ ಅವರ ಹತ್ಯೆಯ ಹಿನ್ನಲೆಯಲ್ಲಿ ಅವರು ಈ ಎಚ್ಚರಿಕೆಯನ್ನು ನೀಡಿದ್ದಾರೆ.
‘ಜನರ ಒಳಿತಿಗಾಗಿ ಕಾರ್ಯ ಮಾಡುವವರನ್ನು ಕೊಲ್ಲುವುದಕ್ಕಿಂತ ಹೀನವಾದುದು ಯಾವುದಿದೆ. ತಮ್ಮ ಸ್ವಂತ ಜನರೊಂದಿಗೆ ವ್ಯವಹರಿಸುವಾಗ ಜಮ್ಮು ಕಾಶ್ಮೀರ ಪೊಲೀಸರು ಆದಷ್ಟು ತಾಳ್ಮೆ ವಹಿಸುತ್ತಾರೆ. ಆದರೆ ಎಲ್ಲಿಯವರೆಗೆ? ಯಾವಾಗ ಅವರು ತಾಳ್ಮೆಗೆಡುತ್ತಾರೋ ಅಂದು ಜನ ಕಠಿಣ ಸ್ಥಿತಿಯನ್ನು ನೋಡಬೇಕಾಗುತ್ತದೆ’ ಎಂದಿದ್ದಾರೆ.
ಪೊಲೀಸರನ್ನು ಜನರ ರಕ್ಷಣೆಗಾಗಿ ನಿಯೋಜನೆಗೊಳಿಸಲಾಗಿದೆ, ಆದರೆ ಅವರ ಹತ್ಯೆಯಂತಹ ಕೃತ್ಯ ನಡೆದರೆ ಭೂತಕಾಲ ಮತ್ತೆ ಮರಳಬಹುದು, ಹೆಚ್ಚಿನ ಶಕ್ತ ಪ್ರದರ್ಶನ ಮಾಡಬೇಕಾದ ಅನಿವಾರ್ಯತೆ ಬರಬಹುದು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.