ಶ್ರೀನಗರ: ಟೂರಿಸಂ ಮತ್ತು ಟೆರರಿಸಂ ನಡುವೆ ಒಂದನ್ನು ಆಯ್ದುಕೊಳ್ಳುವಂತೆ ಕಾಶ್ಮೀರಿಗರಿಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, 40 ವರ್ಷಗಳ ರಕ್ತಪಾತ ಯಾರಿಗೂ ಒಳ್ಳೆಯದನ್ನು ಮಾಡಿಲ್ಲ ಎಂಬುದನ್ನು ಮನಮುಟ್ಟುವಂತೆ ತಿಳಿಸಿದ್ದಾರೆ.
ದೇಶದ ಅತೀದೊಡ್ಡ ಚೆನಾನಿ-ನಶ್ರಿ ಸುರಂಗ ಮಾರ್ಗವನ್ನು ಉದ್ಘಾಟಿಸಿ ಭಾನುವಾರ ಮಾತನಾಡಿದ ಅವರು, ಕಲ್ಲಿನ ಸಾಮರ್ಥ್ಯವನ್ನು ಅರಿತುಕೊಳ್ಳುವಂತೆ ತಪ್ಪುದಾರಿಗಿಳಿದ ಕಾಶ್ಮೀರಿ ಯುವಕರಿಗೆ ಕರೆ ನೀಡಿದ್ದಾರೆ.
ಕಾಶ್ಮೀರದ ಕೆಲ ಸಹೋದರರು ಕಲ್ಲುಗಳನ್ನು ಬಿಸಾಕುವುದರಲ್ಲಿ ಬ್ಯೂಸಿಯಾಗಿದ್ದರೆ, ಶ್ರಮಶೀಲ ಕಾಶ್ಮೀರಿಗಳು ತಮ್ಮ ಭವಿಷ್ಯವನ್ನು ರಚಿಸುವ ಸಲುವಾಗಿ ಕಲ್ಲಿನ ಪರ್ವತವನ್ನು ಕೊರೆದು ಮಾರ್ಗ ನಿರ್ಮಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
‘ಒಂದು ಕಡೆ ಕೆಲ ಯುವಕರು ಕಲ್ಲು ಬಿಸಾಡುತ್ತಿದ್ದಾರೆ, ಇನ್ನೊಂದು ಕಡೆ ಅದೇ ಕಾಶ್ಮೀರದ ಯುವಕರು ಕಲ್ಲನ್ನೇ ಕೊರೆದು ಮೂಲಭೂತ ಸೌಲಭ್ಯವನ್ನು ನಿರ್ಮಿಸುತ್ತಿದ್ದಾರೆ. ದಾರಿತಪ್ಪಿದ ಕಾಶ್ಮೀರಿ ಯುವಕರು ಈಗಲಾದರೂ ಕಲ್ಲಿನ ಮಹತ್ವವನ್ನು ಅರಿತುಕೊಳ್ಳಬೇಕು’ ಎಂದಿದ್ದಾರೆ.
ನಿಮ್ಮ ಮುಂದೆ ಟೂರಿಸಂ ಮತ್ತು ಟೆರರಿಸಂ ಎಂಬ ಎರಡು ಹಾದಿಗಳಿವೆ ಅದರಲ್ಲಿ ನಿಮಗೆ ಯಾವುದು ಬೇಕೋ ಅದನ್ನು ಆರಿಸಿಕೊಳ್ಳಿ ಕಾಶ್ಮೀರಿ ಯುವಕರಿಗೆ ಕರೆ ನೀಡಿದರು.
ಕಾಶ್ಮೀರದ ಅಭಿವೃದ್ಧಿಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಯುವುದಾಗಿ ಭರವಸೆ ನೀಡಿದ ಅವರು, ಅಲ್ ಬಿಹಾರಿ ವಾಜಪೇಯಿ ಅವರ ಕಾಶ್ಮೀರಿಯತ್, ಜಂಹೂರಿಯತ್, ಇನ್ಸಾನಿಯತ್( ಕಾಶ್ಮೀರಿಯತೆ, ಪ್ರಜಾಪ್ರಭುತ್ವತೆ ಮತ್ತು ಮಾನವೀಯತೆ)ಯ ಹಾದಿಯಲ್ಲಿ ನಡೆಯುವುದಾಗಿ ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.