ನವದೆಹಲಿ: ತೃತೀಯ ವಿಮಾ ಕಂಪೆನಿಗಳ ಪ್ರೀಮಿಯಂ ಏರಿಕೆ ಪ್ರಸ್ತಾಪ ವಿರೋಧಿಸುತ್ತಿರುವ ಟ್ರಕ್ ಚಾಲಕರು ದೇಶದ ವಿವಿಧ ರಾಜ್ಯಗಳಲ್ಲಿ ಇಂದಿನಿಂದ ಅನಿಯಮಿತ ಮುಷ್ಕರ ಆರಂಭಿಸಿವೆ.
ಈ ನಡೆಯಿಂದ ಪಶ್ಚಿಮ ಬಂಗಾಳ, ಒಡಿಸಾ, ಅಸ್ಸಾಂ, ತ್ರಿಪುರ, ಕೇರಳ, ಕರ್ನಾಟಕ, ತಮಿಳುನಾಡು, ಬಿಹಾರ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳ ಮೇಲೆ ಪರಿಣಾಮ ಬೀರಲಿದ್ದು, ಆಹಾರ ಪದಾರ್ಥಗಳ ಸರಬರಾಜು ಅಡ್ಡಿ ಉಂಟಾಗಲಿದೆ. ಇದರಿಂದ ಅಗತ್ಯ ವಸ್ತುಗಳ ದರಗಳಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಪ.ಬಂಗಾಳದಲ್ಲಿ 20 ಜಿಲ್ಲೆಗಳ 3 ಲಕ್ಷ ಟ್ರಕ್ಗಳು ಮುಷ್ಕರಕ್ಕೆ ಇಳಿದಿದ್ದು, ಮಹಾರಾಷ್ಟ್ರದ 10 ಸಾವಿರ ಟ್ರಕ್ಗಳು ರಸ್ತೆಗಳಿಂದ ಹೊರಗುಳಿದಿವೆ.
ನಾವು ಮುಷ್ಕರ ಮುಂದುವರೆಸದೇ ಬೇರೆ ಪರ್ಯಾಯ ಮಾರ್ಗವಿಲ್ಲ. ಸುಮಾರು 35 ಲಕ್ಷ ಟ್ರಕ್ಗಳು ರಸ್ತೆಗಳಿಂದ ಹೊರಗುಳಿದಿವೆ ಎಂದು ಅಖಿಲ ಭಾರತ ಸರಕು ಸಾಗಣೆ ವಾಹನಗಳ ಮಾಲೀಕರ ಒಕ್ಕೂಟದ ಅಧ್ಯಕ್ಷ ಚೆನ್ನ ರೆಡ್ಡಿ ತಿಳಿಸಿದ್ದಾರೆ.
ವಾಹನ ಮಾಲೀಕರ ಒಕ್ಕೂಟದ ಪ್ರತಿನಿಧಿಗಳು ಸೋಮವಾರ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಧಾಇಕಾರದ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.
ಐಆರ್ಡಿಎಐ ತೃತೀಯ ವಿಮೆ ತನ್ನ ಪ್ರೀಮಿಯಂ ಹೆಚ್ಚಳದ ಪ್ರಸ್ತಾವವನ್ನು ಹಿಂಪಡೆಯುವ ತನಕ ಪ್ರತಿಭಟನೆ ನಡೆಸಲಾಗುವುದು ಎಂದು ಪ.ಬಂಗಾಳ ಟ್ರಕ್ ಆಪರೇಟರ್ಸ್ ಅಸೋಸಿಯೇಶನ್ನ ಜಂಟಿ ಕಾರ್ಯದರ್ಶಿ ಸಜಲ್ ಘೋಷ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.