ನವದೆಹಲಿ: ಎಪ್ರಿಲ್ 1ರಿಂದ ದೇಶದಲ್ಲಿ ರೈಲ್ವೇಯಿಂದ ಹಿಡಿದು ಸ್ಟೇಟ್ ಬ್ಯಾಂಕ್ ಇಂಡಿಯಾ, ವಾಹನಗಳ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಈ ಬದಲಾದ ನಿಯಮಗಳು ಜನಸಾಮಾನ್ಯರ ಜೀವನದ ಮೇಲೆ ಕೆಲವೊಂದು ಪರಿಣಾಮಗಳನ್ನು ಬೀರಲಿದೆ.
ರೈಲ್ವೇಯ ವಿಕಲ್ಪ ಯೋಜನೆ ಇಂದಿನಿಂದ ಜಾರಿಯಾಗಲಿದೆ. ಇದರ ಅನ್ವಯ ನಾವು ಇನ್ನಿತರ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿದ್ದರೂ ರಾಜಧಾನಿ ಅಥವಾ ಶತಾಬ್ದಿ ರೈಲುಗಳಲ್ಲಿ ಪ್ರಯಾಣಿಸಬಹುದಾಗಿದೆ. ಪ್ರಸ್ತುತ ಇದು ಆನ್ಲೈನ್ ಬುಕಿಂಗ್ಗೆ ಮಾತ್ರ ಲಭ್ಯವಿದೆ. ಮುಂದೆ ಕೌಂಟರ್ಗಳಿಗೂ ವಿಸ್ತರಣೆಯಾಗಲಿದೆ.
ವೇಟಿಂಗ್ ಲಿಸ್ಟ್ನ ಪ್ರಯಾಣಿಕರು ಮುತ್ತೊಂದು ಪರ್ಯಾಯ ರೈಲಿನಲ್ಲಿ ಪ್ರಯಾಣಿಸಲು ಈ ಯೋಜನೆ ಅನುವು ಮಾಡಿಕೊಡಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕನಿಷ್ಠ ಠೇವಣಿ ಮತ್ತು ಎಟಿಎಂ ಟ್ರಾನ್ಸಾಕ್ಷನ್ ಯೋಜನೆಯೂ ಇಂದಿನಿಂದ ಜಾರಿಯಾಗಲಿದೆ. ಅಕೌಂಟ್ಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲದೆ ಹೋದರೆ ದಂಡ ವಿಧಿಸಲಾಗುತ್ತದೆ. 20.ರೂ ನಿಂದ 200ರೂ ದಂಡ ವಿಧಿಸಲಾಗುತ್ತದೆ. ನಿಗದಿಗಿಂತ ಹೆಚ್ಚು ಎಟಿಎಂ ಟ್ರಾನ್ಸಾಕ್ಷನ್ ಮಾಡಿದರೂ ದಂಡ ಬೀಳಲಿದೆ.
ಇಂದಿನಿಂದ ವಾಹನಗಳಿಗೆ ನೂತನ ಎಮಿಷನ್ ನಿಯಮಗಳು ಜಾರಿಗೆ ಬಂದಿದೆ. ಇಂದಿನಿಂದ ದೇಶದ ಯಾವುದೇ ಷೋರೂಂಗಳಲ್ಲಿ ಬಿಎಸ್ 3 ವಾಹನಗಳು ಮಾರಾಟವಾಗುವುದಿಲ್ಲ.
ಅಲ್ಲದೇ ನಗದು ವರ್ಗಾವಣೆಯ ಮಿತಿಯನ್ನು 3 ಲಕ್ಷದಿಂದ 2 ಲಕ್ಷಕ್ಕೆ ಇಳಿಸಿದೆ.
ಒಟ್ಟಿನಲ್ಲಿ ಈ ಎಲ್ಲಾ ನಿಯಮಗಳು ಒಂದಲ್ಲ ಒಂದು ರೀತಿಯಲ್ಲಿ ಸಾಮಾನ್ಯ ಜನರ ಮೇಲೆ ಪ್ರಭಾವ ಬೀರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.