ನವದೆಹಲಿ: ಅನಿವಾಸಿ ಭಾರತೀಯರು ಮತ್ತು ನೋಟ್ ಬ್ಯಾನ್ ವೇಳೆ ಭಾರತದಿಂದ ಹೊರ ಇದ್ದ ಜನರಿಗೆ ತಮ್ಮ ಹಳೆಯ ನೋಟನ್ನು ಬದಲಾಯಿಸಲು ಮಾ.31 ಕೊನೆಯ ದಿನವಾಗಿದೆ.
ಹಿನ್ನಲೆಯಲ್ಲಿ ದೆಹಲಿ, ಮುಂಬಯಿ ಮತ್ತು ಕೋಲ್ಕತ್ತಾಗಳಲ್ಲಿನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊರಗಡೆ ಗುರುವಾರದಿಂದ ಜನಜಂಗುಳಿ ನೆರೆದಿದ್ದು, ಎಲ್ಲರು ತಮ್ಮ ಸಮಯ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದಾರೆ.
ಕೆಲವರು ಹಳೆ ನೋಟು ಹಿಂದಿರುಗಿಸಿ ಹೊಸ ನೋಟು ಪಡೆಯುವಲ್ಲಿ ಯಶಸ್ವಿಯಾದರೆ, ಇನ್ನು ಕೆಲವರು ನಿಖರ ದಾಖಲೆಯನ್ನು ನೀಡಲು ವಿಫಲವಾದ ಹಿನ್ನಲೆಯಲ್ಲಿ ನೋಟು ಎಕ್ಸ್ಚೇಂಜ್ ಮಾಡಲಾಗದೆ ಹಿಂದಿರುಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ ೮ರಂದು 500 ಮತ್ತು 1ಸಾವಿರ ಮುಖಬೆಲೆಯ ನೋಟನ್ನು ನಿಷೇಧಿಸಲು ಆದೇಶ ಹೊರಡಿಸಿದ್ದರು. ಸಾಮಾನ್ಯ ನಾಗರಿಕರಿಗೆ ತಿಂಗಳುಗಳ ಹಿಂದೆಯೇ ನೋಟ್ ಎಕ್ಸ್ಚೇಂಜ್ಗಿದ್ದ ಅವಕಾಶ ಮುಕ್ತಾಯವಗಿದೆ.
ಎನ್ಆರ್ಐಗಳಿಗೆ ಮತ್ತು ದೇಶದಿಂದ ಹೊರಗಿದ್ದವರಿಗೆ ಮಾ.31ರವರೆಗಿನ ಅವಕಾಶವನ್ನು ನೀಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.