ನವದೆಹಲಿ: ಉತ್ತರಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆಗಳ ವಿರುದ್ಧ ಸಾರಿರುವ ಸಮರ ಇದೀಗ ಇತರ ರಾಜ್ಯಗಳನ್ನೂ ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ, ಛತ್ತೀಸ್ಗಢ, ಉತ್ತರಾಖಂಡ, ಜಾರ್ಖಾಂಡ್, ರಾಜಸ್ಥಾನಗಳಲ್ಲೂ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸುವ ಪ್ರಕ್ರಿಯೆ ಆರಂಭಗೊಂಡಿದೆ.
ಉತ್ತರಾಪ್ರದೇಶದ ಮಾರ್ಗವನ್ನು ಅನುಸರಿಸಿದ ಮೊದಲ ರಾಜ್ಯ ಜಾರ್ಖಾಂಡ್, 72 ಗಂಟೆಗಳಲ್ಲಿ ಎಲ್ಲಾ ಅಕ್ರ, ಕಸಾಯಿಖಾನೆಗಳನ್ನು ಮುಚ್ಚಬೇಕು ಎಂದು ಇಲ್ಲಿ ಆದೇಶ ಹೊರಡಿಸಲಾಗಿದ್ದು, ಅದರನ್ವಯ ಹಲವಾರು ಕಸಾಯಿಖಾನೆ ಬಂದ್ ಆಗಿದೆ.
ಹರಿದ್ವಾರದಲ್ಲಿನ 3 ಮಾಂಸದಂಗಡಿಗಳನ್ನು ಮುಚ್ಚಿಸಲಾಗಿದೆ. ರಾಯ್ಪುರದ 11 ಮತ್ತು ಇಂಧೋರ್ನ 1 ಕಸಾಯಿಖಾನೆಗಳ ಬಂದ್ಗೆ ಆದೇಶಿಸಲಾಗಿದೆ. ಜೈಪುರದಲ್ಲಿ ಇದುವರೆಗೆ 4 ಸಾವಿರ ಅಕ್ರಮ ಮಾಂಸದಂಗಡಿಗಳನ್ನು ಬಂದ್ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಎಪ್ರಿಲ್ ಒಳಗಡೆ ಎಲ್ಲಾ ಕ್ರಮ ಮಾಂಸದಂಗಡಿ ಮತ್ತು ಕಸಾಯಿಖಾನೆಗಳು ಬಂದ್ ಆಗಬೇಕು ಎಂದು ಜೈಪುರ ಮುನ್ಸಿಪಲ್ ಕಾಪೋರೇಶನ್ ಆದೇಶ ಹೊರಡಿಸಿದೆ.
ಒಟ್ಟಿನಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರು ಕೈಗೊಂಡ ಅಕ್ರಮ ಕಸಾಯಿಖಾನೆಗಳ ವಿರುದ್ಧದ ಕ್ರಮ 5 ರಾಜ್ಯಗಳನ್ನು ಪ್ರೇರಿಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.